300 ಬಾಳೆ ಗಿಡಗಳ ನಾಶ  ದ್ವೇಷಕ್ಕೆ ಬೆಳೆ ನಾಶ ಮಾಡಿದ ಕಿಡಿಗೇಡಿಗಳು

ರಾಮನಗರ : ವರ್ಷ ಪೂರ್ತಿ ಶ್ರಮ ವಹಿಸಿ ಬೆಳೆದ ೩೦೦ ಬಾಳೆ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿ ನಾಶಪಡಿಸಿರುವ ಘಟನೆ ರಾಮನಗರ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ. ದ್ವೇಷಕ್ಕೆ ರೈತ ಬೆಳೆದ ಬಾಳೆಗಿಡಗಳನ್ನು ನಾಶ ಪಡಿಸಿದ ಕಿಡಿಗೇಡಿಗಳು. ತಾಲ್ಲೂಕಿನ ಕೂಟಗಲ್ ಹೋಬಳಿ ತಿಮ್ಮಸಂದ್ರ ಗ್ರಾಮದ ಪಟೇಲ್ ರಾಜಣ್ಣ ಎಂಬುವರ ತೋಟದಲ್ಲಿ ಕಿಡಿಗೇಡಿಗಳು ತಡರಾತ್ರಿ ಕಟಾವಿಗೆ ಬಂದ ೩೦೦ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿ ದ್ವೇಷ ತೀರಿಸಿಕೊಂಡಿದ್ದಾರೆ. ಸುಮಾರು ೬ ಎಕರೆ ಅಡಿಕೆ ತೋಟದಲ್ಲಿ ೪೦೦೦ ಸಾವಿರ ಬಾಳೆ ಗಿಡಗಳನ್ನು ಅವರು ಬೆಳೆದಿದ್ದರು. ಬಾಳೆ ಗೊನೆಗಳು ಕಟಾವು ಮಾಡುವ ಹಂತಕ್ಕೆ ಬಂದಿದ್ದು, ಸುಮಾರು ೧.೫ ಲಕ್ಷ ರೂಪಾಯಿ ಮೌಲ್ಯದ ಬಾಳೆ ಬೆಳೆಯನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಜಮೀನಿನ ಮಾಲೀಕ ರಾಜಣ್ಣ ರಾತ್ರಿ ೯ ಗಂಟೆಗೆ ಮನೆಗೆ ಬಂದ ನಂತರ ಈ ಕೃತ್ಯವನ್ನು ಎಸಗಲಾಗಿದೆ. ಬೆಳಿಗ್ಗೆ ಅವರು ತೋಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕಟಾವಿಗೆ ಬಂದ ಬಾಳೆ ಗಿಡಗಳು ಕಡಿದುಬಿದ್ದದನ್ನು ಕಂಡು ರೈತ ಕಣ್ಣೀರು ಇಟ್ಟಿದ್ದಾರೆ. ಘಟನೆಗೆ ಸಂಬAಧಿಸಿದAತೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾಗೆ ಸಿಕ್ಕೆಬಿಡ್ತು ಮದ್ದು /ಔಷಧ ಮಾರಾಟಕ್ಕೆ ಭಾರತÀ ಅನುಮತಿ

Sat Jun 6 , 2020
ಕೊರೊನಾ ರಣಕೇಕೆಯ ನಡುವೆ ದೇಶದ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೊನಾ ವೈರಸ್‌ನ್ನು ನಿಯಂತ್ರಿಸಲು ಇಂಜೆಕ್ಷನ್ ಕಂಡುಹಿಡಿಯಲಾಗಿದೆ.  ರೆಮ್‌ಡೆಸಿವಿರ್ ಔಷಧ ಮಾರಾಟಕ್ಕೆ ಭಾರತÀ ಅನುಮತಿ ನೀಡಿದ್ದು, ೧೦೦ ಮೈಕ್ರೋಗ್ರಾಮ್‌ನ ೧ ಇಂಜೆಕ್ಷನ್‌ಗೆ ಅಮೆರಿಕದಲ್ಲಿ ೩.೩೪ಲಕ್ಷ ರೂಪಾಯಿ. ಆದ್ರೆ ಇದೆ ಔಷಧಿಗೆ ಭಾರತದಲ್ಲಿ ೭ ಸಾವಿರ ರೂಪಾಯಿಗಳಿದ್ದು, ೫ಇಂಜೆಕ್ಷನ್‌ಗೆ ೩೫-೪೨ಸಾವಿರ ಖರ್ಚಾಗುತ್ತದೆ. ಕೊರೊನಾ ಸೋಂಕಿತರಿಗೆ ೫ಇಂಜೆಕ್ಷನ್ ನೀಡುವುದರಿಂದ ವೈರಾಣು ನಿರೋಧ ಶಕ್ತಿ ಹೆಚ್ಚಾಗುತ್ತದೆ. ಇಂಜೆಕ್ಷನ್ ತಯಾರಿಸಲು ನಂಜನಗೂಡಿನ ಜ್ಯುಬಿಲೆಂಟ್ ಕಂಪನಿಗೆ ಲೈಸೆನ್ಸ್ […]

Advertisement

Wordpress Social Share Plugin powered by Ultimatelysocial