370ನೇ ಕಲಂ ರದ್ದಾಗಿದ್ದು ಈಗ 12ನೇ ತರಗತಿಗೆ ಪಠ್ಯ

ಕಳೆದ ವರ್ಷ ಆ. ೫ರಂದು, ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತಲ್ಲದೆ, ಜಮ್ಮು ಕಾಶ್ಮೀರವನ್ನು, ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಕೌನ್ಸಿಲ್ ಎನ್‌ಸಿಇಆರ್‌ಟಿ, ೧೨ನೇ ತರಗತಿಯ ಸಮಾಜ ಪಠ್ಯದಲ್ಲಿರುವ “Politics in India since Independence’’ಎಂಬ ಪಾಠವನ್ನು ಪರಿಷ್ಕರಣೆಗೊಳಿಸಿದೆ. ಅದರಲ್ಲಿ, ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆಯಲು ಕಾರಣವಾದ ಸಂವಿಧಾನದ ೩೭೦ನೇ ಕಲಂ ರದ್ದು ವಿಷಯವನ್ನು ಸೇರಿಸಲಾಗಿದೆ. ಆದರೆ, ಕಾಶ್ಮೀರದ ಪ್ರತ್ಯೇಕತಾವಾದವನ್ನು ಪ್ರಚುರಪಡಿಸುವ Separatism and Beyond ಎಂಬ ವಿಷಯವನ್ನು ಕೈಬಿಡಲಾಗಿದೆ. ೨೦೨೧-೨೨ರ ಶೈಕ್ಷಣಿಕ ಸಾಲಿನಿಂದ ಈ ಪಠ್ಯವನ್ನು ಬೋಧಿಸಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು

Thu Jul 23 , 2020
ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು ರೈತ ಸಮಸ್ಯೆ ಹೇಳಲು ಹೋದಾಗ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತಮಗಾಗಿರುವ ಸಮಸ್ಯೆ ಹೇಳಲು ರೈತ ಕರೆ ಮಾಡಿದರೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ದೇವನಹಳ್ಳಿ ತಹಶೀಲ್ದಾರ್ ಅಜಿತ್ ರಾಯ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ರೈತನ ಗೋಳು ಕೇಳದ ದೇವನಹಳ್ಳಿ ಜಿಲ್ಲಾಡಳಿತಿಂದ ಪ್ರತಿ ಬಾರಿ ಈ ಸಮಸ್ಯೆಗೆ ಉತ್ತರ ಕಾಣದ ರೈತ. ಎಚ್ […]

Advertisement

Wordpress Social Share Plugin powered by Ultimatelysocial