ಸರಕಾರ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಮತ್ತು ಸಾರಿಗೆ ನೌಕರರಿಗೆ ನ್ಯಾಯಯುತ 6ನೇ ವೇತನ ಆಯೋಗದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರಾರಂಭಿಸಿದೆ.
ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಬ್ಯಾಂಕ್ ನೌಕರರು ಸರಕಾರದ ಧೋರಣೆ ವಿರುದ್ಧ ಬೀದಿಗಳಿದಿದ್ದು. ಆದರೆ ಇಂದು ಸರಕಾರಿ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ತೊಡಗಿಸಿ ಸಾರಿಗೆ ಸಂಸ್ಥೆಯನ್ನು ಉಳಿಸಿ ಎಂದು ಸರಕಾರದ ಮುಂದೆ ಬೇಡಿಕೊಂಡಿದ್ದಾರೆ ಎಂದರೆ ಯಾವ ಕ್ಷೇತ್ರಗಳು ಇನ್ನು ಬಾಕಿ ಉಳಿದಿದೆ ಸರಕಾರದ ವಿರುದ್ಧ ತಿರುಗಿ ಬೀಳುಲು ಎಂಬ ಸಾಮಾನ್ಯ ಪ್ರಶ್ನೆ ಉದ್ಭವವಾಗಿದೆ.