ಈಜಲು ತೆರಳಿದ್ದ ಬಾಲಕನೋರ್ವ ಮುಳುಗಿ ಸಾವನ್ನಪ್ಪಿದ ಘಟಬೆ
ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನಡೆದಿದೆ.
ಇಂದಿರಾ ನಗರದ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕನಾಗಿದ್ದು, ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಬಾಲಕ ನೀರಿನಲ್ಲಿ ಮುಳುಗಿ
ಮೂರು ದಿನಗಳ ಕಳೆದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.
ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಉಣಕಲ್ ಕೆರೆಯಲ್ಲಿ ಪದೇ ಪದೇ ಇಂತ ದುರ್ಘಟನೆಗಳು ಸಂಭವಿಸುತ್ತಲೆ ಇವೆ. ಆದ್ರೂ
ಹು-ಧಾ ಪಾಲಿಕೆ ಉಣಕಲ್ ಕೆರೆಯಲ್ಲಿ ಸುತ್ತ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದಿರುವದೇ ಇಂತ ಅವಘಡಗಳಿಗೆ ಕಾರಣ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.
https://play.google.com/store/apps/details?id=com.speed.newskannada