ಏರ್ಪೋರ್ಟ್ ರಸ್ತೆಲಿ ಭೀಕರ‌ ಅಪಘಾತಕ್ಕೆ ಕಾರು ಚಾಲಕ ಸಾವು!

ಬೆಂಗಳೂರು: ಕಾರು ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಕಾರಿನ ಚಾಲಕ ಸಾವನ್ನಪ್ಪಿದ ಘಟನೆ ಯಲಹಂಕ ‌ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ದೇವನಹಳ್ಳಿ ಏರ್ಪೋರ್ಟ್ ರಸ್ತೆ BSF ಆರ್ಮಿ ಕ್ಯಾಂಪಸ್ ಬಳಿ ಸಂಭವಿಸಿದೆ.. Ka 27C 0471 ನಂಬರಿನ ಕಾರು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ Ka 40 F 1316 ನಂಬರಿನ KSRTC ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಲೋಹಿತ್ ಪ್ರಸಾದ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇಂದು ಮುಂಜಾನೆ 3:15ಕ್ಕೆ ಯಲಹಂಕ ‌ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ದೇವನಹಳ್ಳಿ ಏರ್ಪೋರ್ಟ್ ರಸ್ತೆ BSF ಆರ್ಮಿ ಕ್ಯಾಂಪಸ್ ಬಳಿ ದುರಂತ ಸಂಭವಿಸಿದೆ. ಮಂತ್ರಾಲಯಕ್ಕೆ ಹೋಗಿ ಬೆಂಗಳೂರಿಗೆ ಬರುತ್ತಿದ್ದ KSRTC ಬಸ್ಸಿಗೆ ಬೆಂಗಳೂರಿನಿಂದ ಏರ್ಪೋರ್ಟ್ ಕಡೆಗೆ ತೆರಳುತ್ತಿದ್ದ ಕಾರು ರಸ್ತೆ ವಿಭಜಕ ದಾಟಿ ಗುದ್ದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕಾರು ಚಾಲಕನ‌ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಯಲಹಂಕ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ‌ನಡೆಸಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ ಗ್ರಾಮ ಗ್ರಾಮಕ್ಕೆ ಯುವಕರು ಒಗ್ಗೂಡಿಸಿ ಅರಿವು ಮೂಡಿಸುತ್ತಿರುವ ಎಸ್ಎಫ್ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಚಿದಾನಂದ್ ಕರಿಗೂಳಿ

Thu Jul 21 , 2022
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಇಂದು ನಡೆದ ಎಸ್ ಎಫ್ ಐ ಹಾಗೂ ಡಿ ವೈ ಎಫ್ ಐ ಒಳಗೊಂಡು ನಿರುದ್ಯೋಗಿ ಹಾಗೂ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದ ಜಿಲ್ಲಾ ಸಂಚಾಲಕ ಚಂದ್ರು ಗೌಡ ಅವರು ಮಾತನಾಡಿ ನಮ್ಮ ಹೋರಾಟ ಏನು ಎಂದರೆ ನಮ್ಮ ದೇಶದಲ್ಲಿ ನಿರುದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯುವುದರಲ್ಲಿ ಬಡಮಕ್ಕಳು ಹಿಂದೆ ಬಿದ್ದಿದ್ದು ಅವರ ಕಲ್ಯಾಣಕ್ಕಾಗಿ ನಾವು […]

Advertisement

Wordpress Social Share Plugin powered by Ultimatelysocial