ನಾನೇನು ಓಡಿಹೋಗಿ ಮದುವೆಯಾಗಲ್ಲ;

ಳೆದ ವಾರ ನಟಿ ಪ್ರೇಮ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಉಡುಪಿಯ ಕಾಪುವಿನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ನಟಿ ಪ್ರೇಮ ಭೇಟಿ ನೀಡಿದ್ದರು. ಎರಡನೇ ಮದುವೆಯ ಕುರಿತಾಗಿ ದೇವರ ಬಳಿ ಕೇಳಲು ಪ್ರೇಮ ಅಲ್ಲಿಗೆ ತೆರಳಿದ್ದರು ಎಂಬ ಸುದ್ದಿ ಹರಿದಾಡಿತ್ತು.

ಇನ್ನು ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯಿಸದೇ ಇದ್ದ ನಟಿ ಪ್ರೇಮ ಈಗ ಮಾಧ್ಯಮಗಳ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಅಂದು ತಾನು ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಗೆಳತಿಯ ಮದುವೆ ಇದ್ದ ಕಾರಣದಿಂದ ಎಂದು ತಿಳಿಸಿದ ಪ್ರೇಮ ತನ್ನ ಮದುವೆ ಎಂದು ಸುದ್ದಿ ಹಬ್ಬಿದ್ದರ ವಿರುದ್ಧ ಕಿಡಿಕಾರಿದರು. ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುವುದು ಬೇಡ, ನಾನು ಎಲ್ಲಿಯೂ ಮದುವೆ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ಎರಡನೇ ಮದುವೆ ಸುದ್ದಿಯನ್ನು ತಳ್ಳಿ ಹಾಕಿದ ಪ್ರೇಮ ನಾನು ಈಗಲೇ ಮದುವೆಯಾಗುವುದಿಲ್ಲ, ಜೀವನದಲ್ಲಿ ದೊಡ್ಡ ಸಾಧನೆ ಮಾಡುವುದು ಸಾಕಷ್ಟಿದೆ, ಮದುವೆಯಾಗಲು ಕಂಕಣ ಭಾಗ್ಯ ಕೂಡಿ ಬರಬೇಕು, ಆ ಸಮಯ ಬಂದಾಗ ನಾನೇ ತಿಳಿಸುತ್ತೇನೆ, ನಾನು ಓಡಿಹೋಗಿ ಮದುವೆಯಾಗಲ್ಲ ಎಂದು ಹೇಳಿಕೆ ನೀಡಿದರು.

ಅಷ್ಟೇ ಅಲ್ಲದೇ ಇಲ್ಲಿಯವರೆಗೂ ತನ್ನನ್ನು ಬೆಂಬಲಿಸುತ್ತಾ, ಬೆಳೆಸುತ್ತಾ ಬಂದಿರುವ ಪ್ರೇಕ್ಷಕರಿಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಯೋಜನೆ ಇದೆ ಎಂದ ಪ್ರೇಮ ನಾನು ಮದುವೆ ಕುರಿತಾಗಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ, ಅದು ಮಹಿಳೆಯ ವೈಯಕ್ತಿಕ ವಿಚಾರ, ಇಂಡಸ್ಟ್ರಿಯಲ್ಲಿ ನಾನು ಗಟ್ಟಿಯಾಗಿ ನಿಲ್ಲಬೇಕೆಂದರೆ ಹಲವಾರು ಅಡೆತಡೆಗಳು ಬಂದವು, ಆದರೆ ಅದ್ಯಾವುದಕ್ಕೂ ನಾನು ಜಗ್ಗಲಿಲ್ಲ ಎಂದೂ ಸಹ ಹೇಳಿಕೆ ನೀಡಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .!

Tue Jan 24 , 2023
 ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ನಿನ್ನೆಯಷ್ಟೇ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ವಿವಾಹ ಸಮಾರಂಭದ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ಪೋಟೋಗಳನ್ನೂ ನೋಡಿದರೆ ಮದುವೆ ಸಮಾರಂಭದ ಮೆರಗು ಯಾವ ರೀತಿ ಕಳೆ ಕಟ್ಟಿತ್ತು ಎನ್ನುವುದನ್ನು ಊಹಿಸಬಹುದಾಗಿದೆ. ಇದೀಗ ಈ ಪ್ರೇಮ ಪಕ್ಷಿಗಳು ತಮ್ಮ ಹನಿಮೂನ್ ಪ್ಲಾನ್ ರದ್ದುಗೊಳಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವರದಿಗಳ ಪ್ರಕಾರ, ಕೆಎಲ್ ರಾಹುಲ್ ಅವರ ಮುಂಬರುವ ಕ್ರಿಕೆಟ್ ಪಂದ್ಯಾವಳಿಗಳ ಕಾರಣವೇ […]

Advertisement

Wordpress Social Share Plugin powered by Ultimatelysocial