ಆಡಿನ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳೆದ ವರ್ಷ ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿಕೊಂಡಿತ್ತು, ಇದನ್ನ ಕಂಡ ಮಂಗಳೂರಿನ ಹುಡುಗ ಚೇತನ್ ತಕ್ಷಣ ಸ್ಥಳಕ್ಕೆ ಧಾವಿಸಿ ಆಡುಮರಿಯನ್ನು ರಕ್ಷಿಸಿದ್ದಾನೆ. ಆದರೆ ರಕ್ಷಿಸೋ ಸಮಯದಲ್ಲಿ ತನ್ನ ಪ್ರಣವನ್ನೆ ಲೆಕ್ಕಿಸದ ಈತ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದ. ಈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರು, ತನ್ನ ಕುಟುಂಬದ ಆಧಾರಸ್ಥಂಭವಾಗಿದ್ದ ಚೇತನ್ ಈಗ ಕೆಲಸವಿಲ್ಲದೆ ಮಾನಸಿಕ ಚಿಂತನೆಯಿಂದ ಕುಗ್ಗಿಹೋಗಿದ್ದ. ಆದ ಕಾರಣ ಇವರ ಆರೋಗ್ಯ ಇನ್ನು ಹದಗೆಟ್ಟಿ ಹೋಗಿತ್ತು. ತನ್ನ ಸ್ನೇಹಿತರೆಲ್ಲಾ ಸೇರಿ ಚೇತನ್ ನನ್ನು ಉಳಿಸಿಕೊಳ್ಳಲು ಹೇಗೊ ಹಣವನ್ನ ಸಂಗ್ರಹಿಸಿದ್ದರು ಆದರು ಕೂಡ ಚೇತನ್ ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆಡಿನ ಮರಿ ರಕ್ಷಿಸಲು ಹೋಗಿ ಯುವಕನೋರ್ವ ಸಾವನ್ನಪ್ಪಿದ್ದಾನೆ
Please follow and like us: