ಧಾರ್ಮಿಕ ದ್ವೇಷ: ಆಗ್ರಾದಲ್ಲಿ ಹಿಂದೂ ಸಂಘಟನಾ ಕಾರ್ಯಕರ್ತರು ಸಾಂತಾಕ್ಲಾಸ್ ಪ್ರತಿಕೃತಿ ದಹಿಸಿದರು ಆಗ್ರಾ: ಕ್ರೈಸ್ತ ಮಿಷನರಿಗಳು ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ
ಸಾಂತಾಕ್ಲಾಸ್ ಮೂಲಕ ಉಡುಗೊರೆಯನ್ನು ವಿತರಿಸುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಹಿಂದೂ ಸಂಘಟನೆಗಳು ಶನಿವಾರ ಪೌರಾಣಿಕ ಪಾತ್ರದ ಪ್ರತಿಕೃತಿ ದಹಿಸಿವೆ.ಹಿಂದೂ ಸಂಘಟನೆಗಳಾದ ಅಂತರರಾಷ್ಟ್ರೀಯ ಹಿಂದೂ
ಪರಿಷತ್, ರಾಷ್ಟ್ರೀಯ ಬಜರಂಗದಳದ ಕಾರ್ಯಕರ್ತರು ಎಂಜಿ ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ಕಾಲೇಜು ನಗರದ ವಿವಿಧ ಶಾಲೆಗಳ ಹೊರಗೆ ಫಾದರ್ ಕ್ರಿಸ್ಮಸ್ ಅಥವಾ ಸೇಂಟ್ ನಿಕೋಲಸ್ ಎಂದು ಕರೆಯಲ್ಪಡುವ ಸಾಂತಾಕ್ಲಾಸ್
ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದರು."ಡಿಸೆಂಬರ್ ಬರುತ್ತಿದ್ದಂತೆ ಕ್ರಿಶ್ಚಿಯನ್ ಮಿಷನರಿಗಳು ಕ್ರಿಸ್ಮಸ್, ಸಾಂಟಾ ಕ್ಲಾಸ್ ಮತ್ತು ಹೊಸ ವರ್ಷದ ಹೆಸರಿನಲ್ಲಿ ಸಕ್ರಿಯಗೊಳ್ಳುತ್ತದೆ. ಸಾಂಟಾಕ್ಲಾಸ್ ಉಡುಗೊರೆಗಳನ್ನು ವಿತರಿಸುವ ಮೂಲಕ
ಮಕ್ಕಳನ್ನು ಕ್ರಿಶ್ಚಿಯನ್ ಧರ್ಮದ ಕಡೆಗೆ ಆಕರ್ಷಿಸುತ್ತಾರೆ" ಎಂದು ರಾಷ್ಟ್ರೀಯ ಬಜರಂಗದಳದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಅಜ್ಜು ಚೌಹಾಣ್ ಆರೋಪಿಸಿದ್ದಾರೆ.ಸಂಘಟನೆಯ ಸದಸ್ಯರಾದ ಅವತಾರ್ ಸಿಂಗ್ ಗಿಲ್,
"ಸ್ಲಂಗಳಿಗೆ ಭೇಟಿ ನೀಡುವ ಮತ್ತು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವ ಮಿಷನರಿಗಳ ಮೇಲೆ ನಾವು ನಿಗಾ ಇಡುತ್ತೇವೆ. ಸದಸ್ಯರು ಅವರ ವಿರುದ್ಧ ಕಟ್ಟುನಿಟ್ಟಾಗಿ ವರ್ತಿಸುತ್ತಾರೆ" ಎಂದು ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Please follow and like us: