ಎಕ್ಸಾಮ್ ಬರೆಯಲು ಬಾರದ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್..!

ಮಂಡ್ಯ : ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗುವ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಇಂದು ಪರೀಕ್ಷೆಗೆ ಗೈರಾಗಿದ್ದಾಳೆ.ಹಿಜಬ್ ಸಂರ್ಘದ ವೇಳೆ ಫೆ.8 ರಂದು ಪಿಇಎಸ್ ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರೆ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿದ್ದಳು.

 

ಈ ಘಟನೆ ನಡೆದ ಬಳಿಕ ಮುಸ್ಕಾನ್ ಕಾಲೇಜಿಗೆ ಆಗಮಿಸಿರಲಿಲ್ಲ. ಇಂದು ಮೈಸೂರು ವಿಶ್ವವಿದ್ಯಾಲಯದ ಎರಡನೇ ವರ್ಷದ ಬಿಕಾಂನ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದೆ.

ಮುಸ್ಕಾನ್ ಕೂಡ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಮೂರನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಿಲ್ಲ. ಅಲ್ಲದೇ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಕೂಡ ತೆಗೆದುಕೊಂಡಿಲ್ಲ. ಮುಸ್ಕಾನ್ ಪಾಸ್‍ಪೋರ್ಟ್ ಪರಿಶೀಲನೆಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಮುಸ್ಲಿಂ ನಾಯಕರು ಮನೆಗೆ ಬಂದು ನಗದು ಬಹುಮಾನ ಪ್ರಕಟಿಸಿದ್ದರು.ಶಿಕ್ಷಣಕ್ಕಿಂತ ನಮಗೆ ಹಿಜಬ್ ಮುಖ್ಯ ಎಂದು ಹೇಳಿ ಈಗಾಗಲೇ ಕರ್ನಾಟಕದ ಹಲವು ಕಡೆ ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR:ಡಬಲ್ ಡಿಜಿಟ್ ತೆರೆಯುವ ಗುರಿಯನ್ನು ಹೊಂದಿದೆ, ಥಿಯೇಟರ್ಗಳಿಗೆ ವ್ಯಾಪಾರವನ್ನು ಮುಂದುವರಿಸುತ್ತದೆ!

Thu Mar 24 , 2022
RRR ಬಾಕ್ಸ್ ಆಫೀಸ್ (ಹಿಂದಿ) ಭವಿಷ್ಯ! ಒಂದು ತಿಂಗಳ ಹಿಂದೆ ಗಂಗೂಬಾಯಿ ಕಥಿಯಾವಾಡಿ ಚಿತ್ರಮಂದಿರಗಳಲ್ಲಿ ಪ್ರಾರಂಭವಾದ ಉತ್ತಮ ಪ್ರದರ್ಶನವು ಈ ವಾರ RRR ನೊಂದಿಗೆ ಮುಂದುವರಿಯಲು ಸಿದ್ಧವಾಗಿದೆ. ಆಲಿಯಾ ಭಟ್ ಅಭಿನಯದ ಚಿತ್ರವು 100 ಕೋಟಿ ಕ್ಲಬ್ ಯಶಸ್ಸನ್ನು ಗಳಿಸಿದರೆ, ಅದರ ನಂತರ 275 ಕೋಟಿಗಳನ್ನು ಆರಾಮವಾಗಿ ದಾಟಲು ನಿರ್ಧರಿಸಲಾಗಿದೆ. ಈಗ RRR ಹೀಟರ್‌ಗಳಲ್ಲಿ ಬರಲು ಹೊಸದಾಗಿದೆ ಮತ್ತು ತೆಲುಗು ಆವೃತ್ತಿಯು ಗಲಭೆ ನಡೆಸಲು ಸಿದ್ಧವಾಗಿದ್ದರೆ, ಹಿಂದಿ ಆವೃತ್ತಿಯು ಸಹ […]

Advertisement

Wordpress Social Share Plugin powered by Ultimatelysocial