ಜಗನ್ ಮನಸ್ಸು ಗೆದ್ದ ಮೆಗಾಸ್ಟಾರ್!! ಚಿರಂಜೀವಿಯ ಮಾತಿಗೆ ನೀಯಮ ಬದಲಾಯಿಸಿದ ಅಂದ್ರ ಸಿಎಂ ?

 

ಆಂಧ್ರ ಪ್ರದೇಶ್‌  ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಕಳೆದ ಕೆಲ ತಿಂಗಳಿಂದ ತೀವ್ರ  ಅಸಮಾಧನವಿತ್ತು. ಜಗನ್ ಸರ್ಕಾರವು ಆಂಧ್ರ ಪ್ರದೇಶದಲ್ಲಿ ಟಿಕೆಟ್ ದರಗಳನ್ನು ಹೆಚ್ಚು ತಗ್ಗಿಸಿರುವ ಕಾರಣ ತೆಲುಗು ಚಿತ್ರರಂಗ ಹಾಗೂ ಆಂಧ್ರದ ಚಿತ್ರಮಂದಿರ ಮಾಲೀಕರ ಸಂಘ ತೀವ್ರ ಅಸಮಾಧನ ವ್ಯಕ್ತಪಡಿಸಿದರು.

ಟಿಕೆಟ್ ದರ ಇಳಿಕೆ ವಿಷಯವಾಗಿ ಆಂಧ್ರ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಪ್ರತಿಷ್ಠೆ ಪ್ರಶ್ನೆಯಾಗಿ ಬೆಳೆದು, ಚಿತ್ರರಂಗದವರು ಸರ್ಕಾರದ ವಿರುದ್ಧ ಸರ್ಕಾರದ ಶಾಸಕರು, ಮಂತ್ರಿಗಳ ವಿರುದ್ಧ ಪ್ರತಿದಿನ ವಾಗ್ದಾಳಿ ನಡೆಸುವುದು ಕೆಲವು ತಿಂಗಳುಗಳಿಂದಲೂ ಸಾಗುತ್ತಲೇ ಇತ್ತು

ಆದರೆ ಕೊನೆಗೆ ಮಧ್ಯ ಪ್ರವೇಶಿಸಿದ ತೆಲುಗು ಚಿತ್ರರಂಗದ ಹಿರಿಯ  ನಟ ಮೆಗಾಸ್ಟಾರ್ ಚಿರಂಜೀವಿರವರು   ಇಂದು ಜಗನ್ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿ ಭೋಜನ ಕೂಟದಲ್ಲಿ ಪಾಲ್ಗೊಂಡು ಚಿತ್ರರಂಗದ ಸಮಸ್ಯೆ, ಟಿಕೆಟ್ ಮತ್ತು ದರ ತಗ್ಗಿಸುವುದರಿಂದ ಭವಿಷ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಗನ್ ಮನವೊಲಿಸಿದ್ದಾರೆ. ಚಿರಂಜೀವಿ ಮಾತುಗಳಿಗೆ ಮಣಿದಿರುವ ಜಗನ್, ಹೊಸ ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ಮನೊರಂಜನಾ ವಿಭಾಗಕ್ಕೆ ಈಗ ಸರ್ಕಾರ ಹೊರಡಿಸಿರುವ ಆದೇಶ ಸಂಖ್ಯೆ 35 ಅನ್ನು ರದ್ದು ಮಾಡುವುದಾಗಿ  ಜಗನ್ ಹೇಳಿದ್ದಾರೆ , ಹೊಸ ಆದೇಶದ ಕರಡನ್ನು ತಯಾರು ಮಾಡಿ  ಜಾರಿಗೊಳಿಸುವ ಮುನ್ನ ನಿಮಗೆ ತೋರಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಟ ಚಿರಂಜೀವಿಗೆ ಮಾತು ನೀಡಿದ್ದಾರೆ. ಜಗನ್ ಭೇಟಿ ಬಳಿಕ ಈ ವಿಷಯವದ ಕುರಿತು  ಚಿರಂಜೀವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು

”ನಾನು ಒಂದು ಕಡೆಯಿಂದ ನಿರ್ಣಯ್ಯ ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಎರಡೂ ಕಡೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸರ್ಕಾರದ ಬಗ್ಗೆ ಸಿನಿಮಾ ರಂಗಕ್ಕೆ ಅಸಮಾಧಾನ, ಅನುಮಾನ ಬೇಡ” ಎಂಬ ಭರವಸೆಯನ್ನು ಜಗನ್ ನೀಡಿದರು. ಅವರ ಮಾತುಗಳು, ಅವರ ಕುಟುಂಬ ನನ್ನನ್ನು ನಡೆಸಿಕೊಂಡ ರೀತಿ ನನಗೆ ತೃಪ್ತಿ ತಂದಿತು. ಚಿತ್ರರಂಗದ ಸಮಸ್ಯೆ ಇತ್ಯರ್ಥವಾಗುತ್ತದೆ ಎಂಬ ನಂಬಿಕೆ ನನಗೆ ಮೂಡಿತು” ಎಂದಿದ್ದಾರೆ ಚಿರಂಜೀವಿ.

ಮೇಲ್ನೋಟಕ್ಕೆ ಕಾಣಿಸುವಂತೆ ಸಿನಿಮಾ ರಂಗ ವರ್ಣಮಯ ಅಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಳೆದ ಲಾಕ್‌ಡೌನ್‌ನಲ್ಲಿ ಅದರಲ್ಲಿಯೂ ಎರಡನೇ ಅಲೆಯ ಸಂದರ್ಭದಲ್ಲಿ ಚಿತ್ರರಂಗವನ್ನು ನಂಬಿಕೊಂಡ ಕುಟುಂಬಗಳು ಹೆಚ್ಚು ಸಂಕಷ್ಟ ಅನುಭವಿಸಿವೆ ಎಂಬುದನ್ನು ಜಗನ್ ಅವರಿಗೆ ಮನವರಿಕೆ ಮಾಡಿಕೊಟ್ಟೆ. ಮನೋರಂಜನೆ ಎಂಬುದು ಎಲ್ಲ ವರ್ಗದವರಿಗೂ ಸುಲಭವಾಗಿ ಸಿಗುವಂತೆ ಆಗಬೇಕು ಎಂಬುವ ಸದುದ್ದೇಶದಿಂದಲೇ  ಟಿಕೆಟ್ ದರಗಳ ಬಗ್ಗೆ ಆದೇಶ ಹೊರಡಿಸಿದ್ದಾಗಿ ಜಗನ್ ಹೇಳಿದರು. ಅವರ

ಕಾಳಜಿಯನ್ನು ಸಹ ನಾವು ಅನುಮಾನಿಸುವಂತಿಲ್ಲ” ಎಂದರು ನಟ ಚಿರಂಜೀವಿ.ನನ್ನ ಮೇಲೆ ನಂಬಿಕೆ ಇಟ್ಟು ತಾಳ್ಮೆಇಂದ ಇರೀ ಎಂದ ಚಿರಂಜೀವಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ನಿಶ್ಚಿತಾರ್ಥದ ದಿನ ಸುಂದರವಾಗಿ ಕಾಣಲು ವರನ ಉಡುಪು ಹೀಗಿರಬೇಕು ?

Fri Jan 14 , 2022
ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ವರ ಅಂದವಾಗಿ ಕಾಣಿಸಲು ಬಯಸುವರು. ಪುರುಷರೂ ಸುಂದರವಾಗಿ ಕಾಣಲು ಹಲವು ವಿಧನವಿದೆ. ವರ ಧರಿಸಲು ಆಯ್ಕೆ ಮಾಡುವ ಉಡುಪು  ಅವನ ಸೌಂದರ್ಯವನ್ನು ಹೆಚ್ಚಿಸುವುದು ಸಾಂಪ್ರದಾಯಿಕ ಉಡುಪುಗಳ ಪೈಕಿ ಶೆರ್ವಾನಿ ಮೊದಲ ಸ್ಥಾನ ಪಡೆದಿದೇ. ಇದು ರಾಯಲ್ ಲುಕ್ ನೀಡುವುದರ ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ವರನನ್ನು ಮಿಂಚುವಂತೆ ಮಾಡುತ್ತದೆ. ನಿಶ್ಚಿತಾರ್ಥದಂಥ ಕಾರ್ಯಕ್ರಮಗಳಿಗೆ ಸೂಟ್ ಕೂಡಾ […]

Advertisement

Wordpress Social Share Plugin powered by Ultimatelysocial