ಅಪ್ಪು ಚಿತ್ರದ ಹಾಡು ಬೇಕೆಂದು ಕೇಳಿದ ಅಭಿಮಾನಿ‌‌‌ ಮೇಲೆ ಡಿ ಬಾಸ್ ಸಂಗಡಿಗರ ಹಲ್ಲೆ.

 

ಡಿ ಬಾಸ್ ಎದುರಿನಲ್ಲೆ ಅಪ್ಪು ಅಭಿಮಾನಿಯನ್ನು ಎಳೆದಾಡಿ ಹಲ್ಲೆ ಮಾಡಿದ ಸ್ನೇಹಿತರು ಮೈಸೂರಿನ‌ ಹೆಬ್ಬಾಳದಲ್ಲಿರೋ ಮೈಸೂರು ಸೋಷಿಯಲ್ಸ್ ರೆಸಾರ್ಟ್ ನಲ್ಲಿ ನಡೆದ ಘಟನೆ ಶನಿವಾರ ರಾತ್ರಿ ಪತ್ನಿಯ ಬರ್ತ್ ಡೇ ಪಾರ್ಟಿ ಆಚರಣೆಗೆ ತೆರಳಿದ್ದ ಉದ್ಯಮಿಯನ್ನು ಅಟ್ಟಾಡಿಸಿ ಹೊಡೆದ ಡಿ ಬಾಸ್ ಬೆಂಬಲಿಗರು ಹಲ್ಲೆ ನೋಡಿಯೂ ಬೆಂಬಲಿಗರನ್ನು ಸುಮ್ಮನಿರುವಂತೆ ಹೇಳದ ಡಿ ಬಾಸ್   ನಟ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಮಾಲೀಕತ್ವದ ಮೈಸೂರು ಸೋಷಿಯಲ್ಸ್ ರೆಸಾರ್ಟ್   ಬೋಗಾದಿ ನಿವಾಸಿ ಉದ್ಯಮಿ ಯಶವಂತ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ ದರ್ಶನ್ ಸಂಗಡಿನ ವಿರುದ್ದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಯಶವಂತ್ ಕುಮಾರ್   ದರ್ಶನ್ ಬೆಂಬಲಿಗನ ಮೇಲೆ ಎಫ್.ಐ.ಆರ್ ದಾಖಲಿಸಿರುವ ಪೊಲೀಸರು   ಬರ್ತ್ ಡೇ ಪಾರ್ಟಿ ವೇಳೆ ಡಿಜೆ ಮ್ಯೂಸಿಕ್ ನಲ್ಲಿ ಅಪ್ಪು ಅಭಿನಯದ ರಾಜಕುಮಾರ ಹಾಡು ಹಾಕುವಂತೆ ಯಶವಂತ್ ಕುಮಾರ್   ಎರಡು ಹಾಡುಗಳ ನಂತರ ಅಪ್ಪು ಹಾಡು ಹಾಕ್ತೇವೆಂದು ಹೇಳಿದ ಡಿಜೆ ಮ್ಯೂಸಿಕ್ ಸಂಘಟಕರು ಇದನ್ನು ಕೇಳಿಸಿಕೊಂಡ ಡಿ ಬಾಸ್ ಸಂಗಡಿನಿಂದ ಯಶವಂತ ಕುಮಾರ್ ಮೇಲೆ ಏಕಾಏಕಿ ಹಲ್ಲೆ  ಮನಬಂದಂತೆ ಎಳೆದಾಡಿ, ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಫ್ಯಾಮಿಲಿಯವರ ಎದುರಿನಲ್ಲೇ ಡಿ ಬಾಸ್ ಬೆಂಬಲಿಗನ ಅಟ್ಟಹಾಸ ದೂರದಲ್ಲೇ ಕುಳಿತು ಎಲ್ಲವನ್ನೂ ವೀಕ್ಷಿಸಿದ ಡಿ ಬಾಸ್ ಮತ್ತು ರೆಸಾರ್ಟ್ ಮಾಲೀಕ‌ ಹರ್ಷಾ ಮೆಲಂಟಾ ಅಪ್ಪು ಹಾಡು ಹಾಕಿ ಎಂದು ಕೇಳಿದ್ದಕ್ಕೆ ಇವರಿಗ್ಯಾಕೆ ಇಷ್ಟೊಂದು ಸಿಟ್ಟು ರಾಜ್ ಕುಮಾರ್ ರಂತೆ ಅಪ್ಪು ವನ್ನು ಕನ್ನಡಿಗರು ಮನೆ ಮಗನಂತೆ ನೋಡುತ್ತಾರೆ ಅವರು ಹಾಡು‌‌ ಕೇಳಬಾರದು, ಇಲ್ಲಿ ಡಿ ಬಾಸ್ ಹಾಡುಗಳನ್ನು ಮಾತ್ರ ಕೇಳಬೇಕು ಇನ್ನೂ ಇಲ್ಲಿಯೇ ಇದ್ದರೆ ನಿನ್ನನ್ನ ಮುಗಿಸ್ತೀವಿ ಅಂತಾ ಜೀವ ಬೆದರಿಕೆ ಡಿ‌ ಬಾಸ್ ಹಾಗೂ ಸಂಗಡಿಗರ ವರ್ತನೆಗೆ ಬೇಸರ ವ್ಯಕ್ತಪಡಿಸಿರೋ ಯಶವಂತ ಕುಮಾರ್  ಇಷ್ಟೊಂದು ದಬ್ಬಾಳಿಕೆ ಒಳ್ಳೆಯದಲ್ಲವೆಂದು ಹೇಳಿರುವ ಯಶವಂತ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ವಿಧಾನಸಭೆಗೆ ಇದು ಕೊನೆ ಚುನಾವಣೆ, ರಾಜಕೀಯ ಬಿಡುತ್ತೇನೆಂದು ಹೇಳಿಲ್ಲ'

Tue Feb 28 , 2023
ಮಿಷನ್ 123 ಅಂತಾ H.D ಕುಮಾರಸ್ವಾಮಿ ರಾಜ್ಯ ಸಂಚಾರ ಮಾಡ್ತಿದ್ದಾರೆ. ಈ ನಡುವೆ ಇದೇ ನನ್ನ ಕೊನೇ ಚುನಾವಣೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಮಾತಾಡಿದ್ದೇನೆ ಅಂದಿದ್ದಾರೆ. ಮೈತ್ರಿ ಸರ್ಕಾರದಲ್ಲಿ 2 ಬಾರಿ ಸಿಎಂ ಆಗಿರುವ ಕುಮಾರಸ್ವಾಮಿ, ಈ ಬಾರಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸಿಎಂ ಆಗುವ ಆಸೆಯೊಂದಿಗೆ, ಜೆಡಿಎಸ್​ ಪಕ್ಷವನ್ನು ಸ್ವತಂತ್ರವಾಗಿ […]

Advertisement

Wordpress Social Share Plugin powered by Ultimatelysocial