ಬೆಂಗಳೂರು : ಟಾಲಿವುಡ್ ಖ್ಯಾತ ನಟ ಅಲ್ಲುಅರ್ಜುನ್ ಬೆಂಗಳೂರಿಗೆ ಆಗಮಿಸಿದ್ದು, ನಟ ಪುನೀತ್ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಮೊದಲು ನಟ ಶಿವರಾಜ್ಕುಮಾರ್ ಮನೆಗೆ ತೆರಳಿ ಅಲ್ಲಿಂದ ಕಂಠೀರವ ಸ್ಟುಡಿಯೋಗೆ ತೆರಳಿದರು.ನಟ ಪುನೀತ್ ಜೊತೆಗಿನ ಒಡನಾಟವನ್ನ ಸ್ಮರಿಸುತ್ತಾ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು.ಕಳೆದ ವರ್ಷ ಅಕ್ಟೋಬರ್ 29 ರಂದು ಪುನೀತ್ ಮರಳಿ ಬಾರದ ಲೋಕಕ್ಕೆ ತೆರಳಿದ್ದು, ಅದಾದ ನಂತರ ಅಲ್ಲು ಅರ್ಜುನ್ ‘ಪುಷ್ಪ: ದಿ ರೈಸ್’ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ರು. ಆದ್ರೆ, ಚಿತ್ರೀಕರಣದ ಮಧ್ಯದಲ್ಲಿ ಅಪ್ಪು ಕುಟುಂಬ ಸದಸ್ಯರನ್ನು ಭೇಟಿಯಾಗಲು ಇಷ್ಟಪಡಲಿಲ್ಲ. ಹಾಗಾಗಿ ಇಂದು ವಿಶೇಷವಾಗಿ ಅವರನ್ನಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗ್ತಿದೆ.ಅಂದ್ಹಾಗೆ, ಈ ಹಿಂದೆ ನಟ ಪುನೀತ್ ಆಗಲಿದಾಗ ಈ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ ‘ಪುನೀತ್ ನನಗೆ ಮೊದಲಿನಿಂದಲೂ ಗೊತ್ತು, ಅವರು ನಮ್ಮ ಮನೆಗೆ ಬರುತ್ತಿದ್ದರು, ಊಟ ಮಾಡುತ್ತಿದ್ದರು. ನಾನು ಬೆಂಗಳೂರಿಗೆ ಹೋದಾಗ ಅವ್ರ ಮನೆಗೆ ಹೋಗ್ತಿದ್ದೆ. ಇದ್ದಕ್ಕಿದ್ದ ಹಾಗೆ ಅವ್ರು ಈಗ ಇಲ್ಲ. ನನಗೆ ತುಂಬಾ ಶಾಕ್ ಆಯ್ತು’ ಎಂದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada