ʼಅಪ್ಪು ಸ್ಮಾರಕಕ್ಕೆʼ ನಟ ʼಅಲ್ಲು ಅರ್ಜುನ್ʼ ನಮನ : ಪುನೀತ್‌ ಪತ್ನಿ ಅಶ್ವಿನಿ, ಶಿವಣ್ಣನಿಗೆ ಸಾಂತ್ವನ

ಬೆಂಗಳೂರು : ಟಾಲಿವುಡ್‌ ಖ್ಯಾತ ನಟ ಅಲ್ಲುಅರ್ಜುನ್‌ ಬೆಂಗಳೂರಿಗೆ ಆಗಮಿಸಿದ್ದು, ನಟ ಪುನೀತ್‌ ರಾಜ್‌ಕುಮಾರ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಮೊದಲು ನಟ ಶಿವರಾಜ್‌ಕುಮಾರ್ ಮನೆಗೆ ತೆರಳಿ ಅಲ್ಲಿಂದ ಕಂಠೀರವ ಸ್ಟುಡಿಯೋಗೆ ತೆರಳಿದರು.ನಟ ಪುನೀತ್ ಜೊತೆಗಿನ ಒಡನಾಟವನ್ನ ಸ್ಮರಿಸುತ್ತಾ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು.ಕಳೆದ ವರ್ಷ ಅಕ್ಟೋಬರ್ 29 ರಂದು ಪುನೀತ್ ಮರಳಿ ಬಾರದ ಲೋಕಕ್ಕೆ ತೆರಳಿದ್ದು, ಅದಾದ ನಂತರ ಅಲ್ಲು ಅರ್ಜುನ್ ‘ಪುಷ್ಪ: ದಿ ರೈಸ್’ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ರು. ಆದ್ರೆ, ಚಿತ್ರೀಕರಣದ ಮಧ್ಯದಲ್ಲಿ ಅಪ್ಪು ಕುಟುಂಬ ಸದಸ್ಯರನ್ನು ಭೇಟಿಯಾಗಲು ಇಷ್ಟಪಡಲಿಲ್ಲ. ಹಾಗಾಗಿ ಇಂದು ವಿಶೇಷವಾಗಿ ಅವರನ್ನಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗ್ತಿದೆ.ಅಂದ್ಹಾಗೆ, ಈ ಹಿಂದೆ ನಟ ಪುನೀತ್‌ ಆಗಲಿದಾಗ ಈ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್‌ ‘ಪುನೀತ್‌ ನನಗೆ ಮೊದಲಿನಿಂದಲೂ ಗೊತ್ತು, ಅವರು ನಮ್ಮ ಮನೆಗೆ ಬರುತ್ತಿದ್ದರು, ಊಟ ಮಾಡುತ್ತಿದ್ದರು. ನಾನು ಬೆಂಗಳೂರಿಗೆ ಹೋದಾಗ ಅವ್ರ ಮನೆಗೆ ಹೋಗ್ತಿದ್ದೆ. ಇದ್ದಕ್ಕಿದ್ದ ಹಾಗೆ ಅವ್ರು ಈಗ ಇಲ್ಲ. ನನಗೆ ತುಂಬಾ ಶಾಕ್ ಆಯ್ತು’ ಎಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೇಮಿಗಳ ದಿನದ ವಿಶೇಷತೆ ಏನು ತಿಳಿಯಿರಿ .

Thu Feb 3 , 2022
ಫೆಬ್ರವರಿ ತಿಂಗಳು ಬಂತೆಂದರೆ ನೆನಪಾಗುವುದೇ ವ್ಯಾಲೆಂಟೈನ್ಸ್ ಡೇ ಮತ್ತು ಅದರ ಹಿಂದಿದ 7 ದಿನಗಳು. ಅದನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಕರೆಯುತ್ತಾರೆ. ಜಗತ್ತಿನಾದ್ಯಂತ ಈ ವ್ಯಾಲೆಂಟೈನ್ಸ್ ವಾರವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮ‌ ಕುರುಡು, ಪ್ರೇಮಕ್ಕೆ ಸಾವಿಲ್ಲ, ಪ್ರೇಮ ಅಮರ, ಪ್ರೇಮಾಂಕುರ ಹೇಗಾಗುತ್ತದೋ ಗೊತ್ತಿಲ್ಲ. ಹೀಗೆ ಪ್ರೇಮದ ಬಗೆಗಿನ ವ್ಯಾಖ್ಯಾನ ಮುಂದುವರಿಯುತ್ತದೆ. ಪ್ರೇಮ ಅಮರವಾದರೂ ಆಚರಣೆಗಾಗಿ ಒಂದು ವಾರವನ್ನೇ ಮೀಸಲಾಗಿರಿಸಲಾಗಿದೆ. ಫೆಬ್ರವರಿ 7ರಿಂದ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ […]

Advertisement

Wordpress Social Share Plugin powered by Ultimatelysocial