ರೈತರು ಮಳೆಗಾಗಿ ಪ್ರಾರ್ಥಿಸುತ್ತ ಆಷಾಢದಲ್ಲಿ ಮಣ್ಣುಪೂಜೆ ಮಾಡುತ್ತಾರೆ. ಜ್ಯೇಷ್ಠ ಬಹುಳ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅಂದು ಮಣ್ಣಿನ ಜೋಡಿ ಎತ್ತುಗಳನ್ನು ತಯಾರಿಸಿ ರೈತರು ಪೂಜೆ ಮಾಡುತ್ತಾರೆ. ಮಣ್ಣೆತ್ತನ್ನು ಪೂಜಿಸುವಾಗ ತೀವ್ರ ಮಳೆಯ ಅಭಾವವಿರುವುದನ್ನು ಕವಿ ‘ಮಣ್ಣೆತ್ತೂನೂ ನೀರಡಿಸ್ಯಾವ’ ಎಂದು ಧ್ವನಿಪೂರ್ಣವಾಗಿ ಚಿತ್ರಿಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
“ಓ ಆಷಾಢಾ”
]
“ಓ ಆಷಾಢಾ”
ರೈತರು ಮೊದಲ ಮಳೆಗೆ ನೆಲ ಬಿತ್ತನೆ ಮಾಡಿದ ನಂತರ ಪ್ರಮುಖವಾಗಿ ಕಾಯುವುದು ಆಷಾಡದ ಮೃಗಶಿರಾ ಮಳೆಗಾಗಿ , ಅದಕ್ಕಾಗಿ ಅವರು ಪರಿತಪಿಸುವ ಚಿತ್ರಣವನ್ನು ಎಳೆ ಎಳೆಯಾಗಿ ವರಕವಿ ಬೇಂದ್ರೆ ಅವರು “ಓ ಆಷಾಢಾ” ಕವನದಲ್ಲಿ ನೀಡಿದ್ದಾರೆ.
ಬಿತ್ತಿದ ಬೀಜ ಹಕ್ಕಳಿ ಎಬ್ಬಿಸಿಕೊಂಡು ನಿಂತಿರುತ್ತವೆ. ಹಾಗೆ ಮಡಿಲೊತ್ತಿಕೊಂಡು ನಿಂತಾಗ ಅಲ್ಲಿ ಮೊಳಕೆ ಕಾಣಿಸುತ್ತದೆ. ಅದು ಮಳೆನೀರಿಗಾಗಿ ಕಾಯುತ್ತ್ತಿರುತ್ತದೆ. ಸ್ವಲ್ಪ ಮಳೆ ಆದರೂ ಹಕ್ಕಳಿ ನೆನೆದು ಕರಗಿ ಹೋಗುತ್ತದೆ. ಮೊಳಕೆಗೆ ಉಟಾವ್ ಸಿಗುತ್ತದೆ. ಬೆಳೆ ಬಾಳುತ್ತದೆ.
Please follow and like us: