ಸುರತ್ಕಲ್:6-2 ತಂಡದಿಂದ ಯುವಕನ ಕೊಲೆಯತ್ನ

ಮಂಗಳೂರು, ಫೆ.2: ತಂಡವೊಂದು ಯುವಕನ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ಕಾಟಿಪಳ್ಳದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಕಾಟಿಪಳ್ಳದ ಮುಹಮ್ಮದ್ ಅನಸ್ (29) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ.ಬಾಡಿಗೆ ಮನೆ ತೆರವು ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮುಹಮ್ಮದ್ ಅನಸ್ ತನ್ನ ಸ್ನೇಹಿತರಾದ ಅಬೂಬಕರ್ ಮತ್ತು ಹ್ಯಾರಿಸ್ ಅವರೊಂದಿಗೆ 6ನೇ ಬ್ಲಾಕ್‌ನ ಮನೆಯ ಮುಂದೆ ನಿಂತು ಮಾತನಾಡುತ್ತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಆಗಮಿಸಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಕಾಟಿಪಳ್ಳ-ಕೃಷ್ಣಾಪುರ ನಿವಾಸಿಗಳಾದ ರವೂಫ್, ಮುಸ್ತಫಾ ಮತ್ತಿತರರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲಾಡ್ನ ಮೆಡಿಕಲ್ ಶಾಪ್ ಮಾಲೀಕರಿಗೆ 91,000 ರೂ ನಕಲಿ ;

Wed Feb 2 , 2022
ಮಲಾಡ್‌ನಲ್ಲಿನ ಮೆಡಿಕಲ್ ಶಾಪ್ ಮಾಲೀಕರೊಬ್ಬರಿಗೆ ಆಹಾರ ಮತ್ತು ಔಷಧ ಅಧಿಕಾರಿಯಂತೆ ಪೋಸು ಕೊಡುವ ವ್ಯಕ್ತಿಯೊಬ್ಬ ಭಾನುವಾರ 90,000 ರೂ. ಭೂಮಿ ಪಾರ್ಕ್ ಬಳಿಯ ಸತ್ಯಂ ಕೆಮಿಸ್ಟ್ ಮಾಲೀಕ ಜಗದೀಶ್ ಪರಿಹಾರ್ ಅವರಿಗೆ ‘ಆಹಾರ ಮತ್ತು ಔಷಧ ಇಲಾಖೆಯ ಆಹಾರ ನಿರೀಕ್ಷಕ’ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಭಾನುವಾರ ಕರೆ ಬಂದಿತ್ತು. ಪರಿಹಾರ್ ಅವರ ಮೆಡಿಕಲ್ ಸ್ಟೋರ್‌ಗೆ ಸೀಲ್ ಮಾಡಲು ಆದೇಶ ಬಂದಿದೆ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ. ಬಾಂದ್ರಾದಲ್ಲಿರುವ ‘ಆಹಾರ ಮತ್ತು […]

Advertisement

Wordpress Social Share Plugin powered by Ultimatelysocial