ತ್ಯಾಗ ಬಲಿದಾನದಕ್ಕೆ ಮತ್ತೊಂದು ಹೆಸರೇ ಬಿಜೆಪಿ ಪಕ್ಷ ಎಂದು ರಾಜ್ಯಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ “ಸಂದೀಪಕುಮಾರ, ಕೆ,ಸಿ ಹೇಳಿದರು.
ಅವರು ಲಕ್ಷ್ಮೇಶ್ವರ ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪ ದಲ್ಲಿ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಕಾರ್ಯಕಾರಣಿ ಉದ್ಘಾಟನೆ ಮಾಡಿ ಮಾತನಾಡುತ್ತ ಯುವ ಮೋರ್ಚಾದ ಕಾರ್ಯವೈಖರಿ, ಅವಲೋಕನ ನಡೆಸುವುದೇ ಕಾರ್ಯಕಾರಣಿ ಉದ್ದೇಶ ವಾಗಿದ್ದು ಯುವಕರ ನೇತೃತ್ವವನ್ನು ಯುವಕರೆ ರಾಷ್ಟ್ರಸೇವೆಯಲ್ಲಿ ತೊಡಗಿಸುವ ಪಕ್ಷ ಇದೆ ಅಂದ್ರೆ ಅದು ಬಿಜೆಪಿ ಪಕ್ಷವಾಗಿದ್ದು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ನಾಯಕ ಸ್ಥಾನವನ್ನು ಕೊಡುತ್ತೆ ಯಾವುದೇ ತೊಳಬಲ ವಿಲ್ಲದೆ ಸಮಾಜದದಲ್ಲಿ ತೊಡಗಿಸುವವರನ್ನು ಪಕ್ಷದಲ್ಲಿ ಸ್ಥಾನಮಾನ ಕೊಡುತ್ತದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಮುಖ್ಯವಾಹಿನಿಗೆ ತರುವುದು ಬಿಜೆಪಿ ಉದ್ದೇಶವಾಗಿದ್ದು ಕಾರ್ಯಕರ್ತರಿಗೆ ತಾಯಿ ಹೃದಯ ಇರಬೇಕು ಕಿವಿ ಇಲ್ಲವರಿಗೆ ಕಿವಿಯಾಗಿ ಕಣ್ಣು ಇಲ್ಲದವರಿಗೆ ಕಣ್ಣು ಆಗಿ ಧ್ವನಿ ಇಲ್ಲದವರಿಗೆ ಧ್ವನಿ ಆಗುವುದೇ ಯುವ ಮೋರ್ಚದ ಕಾರ್ಯಕರ್ತರ ಕೆಲಸ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೊರೋನ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ ಮುಂದಿನ ದಿನಮಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆಸಿ ಯುವ ಮೋರ್ಚಾದಿಂದ ರಾಜ್ಯ ಸಮಾವೇಶ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿ ಗಳಾಗಿ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಹಾಗೂ ಮಾಜಿ ಶಾಸಕ ಜಿ ಎಮ್ ಮಹಾಂತಶೆಟ್ಟರ ಬಿಜೆಪಿ ಪಕ್ಷದ ಅಧಿಕಾರಿ ಬರುವಲ್ಲಿ ಯುವ ಮೋರ್ಚಾದ ಬಿಜೆಪಿ ಕಾರ್ಯಕರ್ತರ ಶ್ರಮ ಬಹಳ ಇದೆ ಪಕ್ಷದ ಜೀವಾಳವೆ ಯುವ ಕಾರ್ಯಕರ್ತರು ಯುವಕರು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಅತಿ ಹೆಚ್ಚು ಯುವ ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿದ್ದು ಮುಂದಿನ ದಿನಮಾನಗಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: