ಡಾಲಿ ಧನಂಜಯ್(Dhananjay) ಅಭಿನಯದ ‘ಬಡವ ರಾಸ್ಕಲ್’(Badava Rascal) ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಅಭಿಮಾನಿಗಳು ‘ಬಡವ ರಾಸ್ಕಲ್’ ಕಂಡು ಫುಲ್ ಖುಷ್ ಆಗಿದ್ದಾರೆ. ಮಧ್ಯಮ ವರ್ಗದ ಕುಟುಂಬ(Middle Class Family)ದ ಜೀವನವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಇನ್ನೂ ‘ಬಡವ ರಾಸ್ಕಲ್’ ಸಿನಿಮಾ ನೋಡುಲು ಶಿವರಾಜ್ ಕುಮಾರ್(Shivaraj Kumar) ಅವರಿಗೆ ಆಹ್ವಾನ ನೀಡಲಾಗಿತ್ತು. ಆದರಂತೆ ನಿನ್ನೆ ಮೈಸೂರಿನಲ್ಲಿ ಶಿವಣ್ಣ ‘ಬಡವ ರಾಸ್ಕಲ್’ ಸಿನಿಮಾ ನೋಡಿದ್ದಾರೆ. ಬಳಿಕ ಮಾಧ್ಯಮದ ಮುಂದೆ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ಧನಂಜಯ್ ಅವರ ಫಸ್ಟ್ ಪ್ರೊಡಕ್ಷನ್(First Production) ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದಾರೆ. ಸಿಂಪಲ್ ವಿಷಯವನ್ನು ಬಹಳ ಚೆನ್ನಾಗಿ ಹೇಳಿದ್ದಾರೆ. ಹೆಚ್ಚು ಆಡಂಬರ ಮಾಡದೇ ಮಾಡಿದ್ದಾರೆ. ತುಂಬಾ ಮನರಂಜನೆ ಕೊಡುತ್ತೆ. ಧನಂಜಯ್ ಎಮೋಷನಲ್ ಸೀನ್(Emotional Scene)ಗಳಲ್ಲಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಸ್ನೇಹಿತರ ಬಗ್ಗೆ ತಿಳಿಯದೇ ನಾವು ಇರುತ್ತೇವೆ. ಈ ಸಿನಿಮಾ ನೋಡಿದ ನಂತರ ಸ್ನೇಹಿತರ ಬಗ್ಗೆ ಗೊತ್ತಾಗುತ್ತೆ. ಒಳ್ಳೆ ಸಿನಿಮಾ ತಂದೆ-ತಾಯಿ ಸೆಂಟಿಮೆಂಟ್(Father-Mother Senitment) ಇದೆ ಎಲ್ಲರೂ ಚಿತ್ರ ನೋಡಿ ಎಂದು ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಇನ್ನೂ ಇದೇ ಸಮಯದಲ್ಲಿ ಡಿಸೆಂಬರ್ 31ರಂದು ಕರ್ನಾಟಕ ಬಂದ್(Karnataka Bandh)ಗೆ ಕರೆ ಕೊಟ್ಟಿರುವ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅಂತ ಮುಂದೆ ಇದೆ ನೋಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: