ಬಾಗಲಕೋಟೆಯಲ್ಲಿ ಲಾರಿ -ಬಸ್ ನಡುವೆ ಮುಖಾಮುಖಿ ಡಿಕ್ಕಿ

ಕ್ಯಾಂಟರ್‌ ಲಾರಿ ಹಾಗೂ ಕೆಎಸ್‌ ಆರ್‌ ಟಿಸಿ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಈ ಅವಘಡದಲ್ಲಿ ಸುಮಾರು 14 ಮಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಬಾಗಲಕೋಟೆಯ ಗದ್ದನಕೇರಿ ಬಳಿ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್ ಸಾವನ್ನಪ್ಪಿದ್ದಾನೆ.ಬಸ್‌ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಕ್ಯಾಂಟರ್‌ ಲಾರಿ ಹೊರಟಿತ್ತು. ಆದರೆ ಕ್ಯಾಂಟರ್‌ ಲಾರಿ ಚಾಲಕ ಅತೀ ವೇಗದಿಂದ ಬಂದು ಬಸ್‌ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮವಾಗಿ ಪಿಯುಸಿ ವಿದ್ಯಾರ್ಥಿ ರಾಹುಲ್‌ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಾಲಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಾರಾಧ್ಯ ಮಳೇಂದ್ರ ಶ್ರೀಗಳಿಂದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ನೂರಾರು ಜನರಿಗೆ ರುದ್ರಾಕ್ಷಿ ಧಾರಣೆ.

Fri Jan 6 , 2023
ಕಲಬುರ್ಗಿ:ಅಫಜಲಪುರ ತಾಲ್ಲೂಕಿನ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಅಂಗವಾಗಿ ಜನೇವರಿ 1ರಿಂದ ಜನೇವರಿ 30 ರ ವರೆಗೆ 118 ಹಳ್ಳಿಗಳಿಗೆ 30 ದಿನಗಳ ಪಾದಯಾತ್ರೆ ಮಣ್ಣೂರ ಗ್ರಾಮದಿಂದ ಪ್ರಾರಂಭವಾದ ಶಾಂತವೀರ ಶ್ರೀ ಗುರು ಮಳೆಂದ್ರ ಜ್ಯೋತಿ ರಥಯಾತ್ರೆ, ಸದ್ಭಾವನಾ ಪಾದಯಾತ್ರೆ ಹಾಗೂ “ದುಶ್ಚಟಗಳ ಬಿಕ್ಷೆ ಸದ್ಗುಣಗಳ ದೀಕ್ಷೆ” ಹಾಗೂ 25000 ಸಾವಿರ ರುದ್ರಾಕ್ಷಿ ಧಾರಣೆ ಹಮ್ಮಿಕೊಳ್ಳಲಾಗಿದ್ದು ಇಂದು ಮಂಗಳೂರ ಗ್ರಾಮಕ್ಕೆ ಬಂದು ತಲುಪಿದ್ದು ಸಸಿಗೆ ನೀರು ಹಾಕುವ […]

Advertisement

Wordpress Social Share Plugin powered by Ultimatelysocial