ಕಣ್ಣೀರು ಹಾಕಿದ “ಭಜರಂಗಿ:!

 

ಹುಬ್ಬಳ್ಳಿ: ಇಂದು ನಾಡಿನೆಲ್ಲೆಡೆ ಹನುಮ ಜಯಂತಿ ಸಡಗರ ಕಳೆಗಟ್ಟಿದೆ. ಹನುಮ ನಾಮ ಜಪ ಮೊಳಗುತ್ತಿದೆ. ಈ ದಿವನೇ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ಸಂಭವಿಸಿದ್ದು, ಇದನ್ನು ನೋಡಲು ದೇಗುಲಕ್ಕೆ ಜನಸಾಗರವೇ ಬರುತ್ತಿದೆ.

ಹನುಮ ವಿಗ್ರಹದ ಕಣ್ಣಿನಲ್ಲಿ ನೀರು ಬರುತ್ತಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಬುಡರಸಿಂಗಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನೆಲೆ ಹನುಮ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಮುಂದಾದಾಗ ಹನುಂತನ ಕಣ್ಣಿನಲ್ಲಿ ಹನಿ ಹನಿ ನೀರು ಸುರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಬೆಳಗ್ಗೆಯಿಂದ ನಿರಂತರವಾಗಿ ಹನುಮಂತ ದೇವರ ಕಣ್ಣಿನಲ್ಲಿ ಹನಿ ಹನಿಯಾಗಿ ನೀರು ಸುರಿಯುತ್ತಲೇ ಇದೆ.

ಬಟ್ಟೆಯಿಂದ ಕಣ್ಣನ್ನು ಒರೆಸಿದರೂ ನೀರು ಬರುತ್ತಲೇ ಇದೆ. ಸಂತೃಪ್ತಿಗೊಂಡು ದೇವರು ಆನಂದಭಾಷ್ಪ ಸುರಿಸುತ್ತಿದ್ದಾರೆ ಎಂದೇ ಸ್ಥಳೀಯರು ಬಣ್ಣಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು: ಈಗಾಗಲೇ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆ!

Sat Apr 16 , 2022
  ಬೆಂಗಳೂರು: ಈಗಾಗಲೇ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ  ರಾಜ್ಯದ ರಾಜಧಾನಿ ಜನರು ತತ್ತರಿಸಿ ಹೋಗಿದ್ದಾರೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹೈರಾಣಾಗಿ ಹೋಗಿದ್ದಾರೆ. ಈ ನಡುವೆಯೂ ಮುಂದಿನ 48 ಗಂಟೆಯಲ್ಲಿ ಮತ್ತೆ ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ( Weather Department forecast ) ನೀಡಿದೆ. ಈ ಬಗ್ಗೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರಿನ ಹವಾಮಾನ ಇಲಾಖೆಯು ( […]

Advertisement

Wordpress Social Share Plugin powered by Ultimatelysocial