ಬೆಂಗಳೂರು ರಸ್ತೆಗುಂಡಿಗೆ ಮತ್ತೊಂದು ಬಲಿ: ಜಲ ಮಂಡಳಿ ಅಗೆದಿದ್ದ ಗುಂಡಿಗೆ ಬಿದ್ದು ಯುವಕ ಸಾವು

ಬೆಂಗಳೂರು: ರಸ್ತೆಗುಂಡಿಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ನಲ್ಲಿ ರವಿವಾರ ರಾತ್ರಿ ನಡೆದಿದೆ.

 

ಅಶ್ವಿನ್ ( 27) ಮೃತ ಯುವಕ ಎಂದು ತಿಳಿದು ಬಂದಿದೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನ್ ರವಿವಾರ ರಾತ್ರಿ ಮುನೇಶ್ವರ ಲೇಔಟ್ ರಸ್ತೆಯಲ್ಲಿ ಬರುವಾಗ ಜಲಮಂಡಳಿ ಅಗೆದಿದ್ದ ರಸ್ತೆಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಜಲಮಂಡಳಿ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಸಂಬಂಧಿಕರು, ಸ್ನೇಹಿತರು ಆಕ್ರೋಶ ಹೊರ ಹಾಕಿದ್ದಾರೆ.

ಸವಾರ ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ್ದಾರೆ ಎನ್ನಲಾಗಿದ್ದು, ಬೈಕ್ ಚಲಾಯಿಸುವ ವೇಳೆ ಹೆಲ್ಮೆಟ್ ಹಾಕಿರಲಿಲ್ಲ ಎಂದು ಸಂಚಾರಿ ಪೊಲೀಸರು ಹೇಳಿದ್ದು, ಈ ಬಗ್ಗೆ ವೈದ್ಯಕೀಯ ವರದಿ ಕೈ ಸೇರಬೇಕಿದೆ ಎಂದು ಹೇಳಿದ್ದಾರೆ.

ಯಲಹಂಕ‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಅವರ ಆಟವನ್ನು ಪ್ರೀತಿಸಿ ಏಕೆಂದರೆ ಅವರು ಒತ್ತಡವಿಲ್ಲದೆ ಆಡುತ್ತಾರೆ'

Mon Mar 14 , 2022
ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನಲ್ಲಿ ಅಸಾಧಾರಣ 175 ರನ್ ಗಳಿಸಿದ ನಂತರ ಅವರು ಇತ್ತೀಚೆಗೆ ಕಪಿಲ್ ದೇವ್ ಅವರ ದೀರ್ಘಾವಧಿಯ ದಾಖಲೆಯನ್ನು ಟೆಸ್ಟ್‌ನಲ್ಲಿ ನಂ.7 ರಲ್ಲಿ ಭಾರತೀಯ ಬ್ಯಾಟರ್‌ನಿಂದ ಮುರಿದರು ಮತ್ತು ಭಾರತದ ಮಾಜಿ ನಾಯಕ ಈಗ ಅವರ ಹೊಗಳಿಕೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಶ್ರೇಯಾಂಕದ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗ ನಂ.1 ಶ್ರೇಯಾಂಕದ ಆಲ್‌ರೌಂಡರ್ ಆಗಿರುವ 33 ವರ್ಷದ ಸ್ಟಾರ್‌ಗೆ. ರವೀಂದ್ರ ಜಡೇಜಾ ಅವರು […]

Advertisement

Wordpress Social Share Plugin powered by Ultimatelysocial