ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಪರಿವರ್ತಿಸಿ ಆದೇಶ ಮಾಡಿದ್ದಾರೆ ಎಂದು ಆರೋಪ
ಹುಸ್ಕೂರು ಗ್ರಾಮಸ್ಥರಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ
ಹುಸ್ಕೂರು ಗ್ರಾಮಸ್ಥ ನಾಗಭೂಷಣ್ ಹೇಳಿಕೆ –
ಯಲಹಂಕ ಕ್ಷೇತ್ರ, ದಾಸನಪುರ ಹೋಬಳಿ, ಹುಸ್ಕೂರು ಗ್ರಾಮದ ಗುಂಡುತೋಪನ್ನ ಸ್ಮಶಾನವಾಗಿ ಮಾರ್ಪಾಡು ಮಾಡಲು ಮಂಜುನಾಥ್ ಅವರು ಆದೇಶ ಮಾಡಿದ್ದಾರೆ
ಸ್ಥಳೀಯ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಒತ್ತಡದಿಂದ ಈ ಆದೇಶ ಮಾಡಿದ್ದಾರೆ ಎಂದು ಆರೋಪ
ಹುಸ್ಕೂರು ಗ್ರಾಮದ 108 ಸರ್ವೆ ನಂಬರ್ ನಲ್ಲಿರುವ 2 ಎಕರೆ 22 ಗುಂಟೆ ಗುಂಡುತೋಪು ಜಾಗ
ಈ ಜಾಗವನ್ನ ಏಳು ವರ್ಷಗಳಿಂದ ಗ್ರಾಮದ ಜನರು ಸ್ವಂತ ದುಡ್ಡು ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದಾರೆ
ಈ ಜಾಗದಲ್ಲಿರುವ 20 ಹಳೆಯ ಮರಗಳನ್ನ ಬೆಳೆಸಿ, 130 ಕ್ಕೂ ಹೆಚ್ಚು ಹೊಸ ಗಿಡ ನೆಟ್ಟು ಬೆಳೆಸಲಾಗುತ್ತಿದೆ
ಆದ್ರೆ ಕೆಲ ದಿನಗಳಿಂದ ಗ್ರಾಮದ ಜನರು ಮೃತಪಟ್ಟವರನ್ನ ಗುಂಡುತೋಪಿನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ
ಆದ್ರೆ ಸರ್ವೆ ನಂಬರ್ 2 ರಲ್ಲಿ ಇದೇ ಗ್ರಾಮದಲ್ಲಿ 1 ಎಕರೆ 27 ಗುಂಟೆ ಸ್ಮಶಾನಕ್ಕೆ ಮೀಸಲಿಡಲಾಗಿದೆ
ಆದ್ರೆ ಆ ನಿಗಧಿತ ಸ್ಮಶಾನ ಜಾಗದಲ್ಲಿ 5 ಗುಂಟೆಯೂ ಬಳಕೆಯಾಗಿಲ್ಲ
ಈ ಸಂಬಂಧ ಪಿಡಿಓ, ಸ್ಥಳೀಯ ಶಾಸಕರಿಗೆ ಮನವಿ ಪತ್ರ ಬರೆದಿದ್ದೇವೆ
ಗುಂಡಿತೋಪನ್ನ ಸ್ಮಶಾನದ ಜಾಗವನ್ನಾಗಿ ಮಾಡಿ ಮಂಜುನಾಥ್ ಅವರು 08-03-22 ರಂದು ಆದೇಶ ಮಾಡಿದ್ದಾರೆ
ಗುಂಡುತೋಪನ್ನ ಶಾಲಾ ಮಕ್ಕಳಿಗೆ ಆಟವಾಡಲು , ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಅಭಿವೃದ್ಧಿ ಮಾಡಿದ್ದೇವೆ
ಹಾಗಾಗಿ ಈ ಆದೇಶವನ್ನ ರದ್ದುಗೊಳಿಸಿ ಗುಂಡುತೋಪನ್ನ ಉಳಿಸಬೇಕು ಎಂದು ಗ್ರಾಮಸ್ಥರ ಒತ್ತಾಯ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: