ದೆಹಲಿ ನಂತರ ಇದೀಗ ಬೆಂಗಳೂರಿನಲ್ಲಿ ಇಂದಿನಿಂದ ಹೊಸ UPS (United Parcel Services) ಇಂಟರ್ ಕಾಂಟಿನೆಂಟಲ್ ಜಾಗತಿಕ ಸ್ಮಾರ್ಟ್ ಲಾಜಿಸ್ಟಿಕ್ ಸರ್ವೀಸ್ ಪ್ರಾರಂಭವಾಗಿದೆ. ಇದರಿಂದ ಭಾರತ ಏಷ್ಯಾ, ಯೂರೋಪ್&ಅಮೇರಿಕಾ ಖಂಡಗಳೊಂದಿಗೆ ಸ್ಮಾರ್ಟ್ ಲಾಜಿಸ್ಟಿಕ್ ವ್ಯಾಪಾರ ಅವಕಾಶ ಪಡೆಯುವ ಮೂಲಕ ಸಂಪರ್ಕ ಸೇತುವೆಯಾಗಲಿದೆ. ಹೊಸ ಬೋಯಿಂಗ್ 747-8 ವಿಮಾನ ಭಾರತದಲ್ಲಿ ಸೇವೆ ಪ್ರಾರಂಭಿಸಿದೆ.
ಈಗಾಗಲೇ ದೆಹಲಿ 2020ರ ಹಣಕಾಸು ವರ್ಷದಲ್ಲಿ 400 ಬಿಲಿಯನ್ ಡಾಲರ್ ರಪ್ತನ್ನು ಭಾರತ ಪೂರೈಸಿದೆ. ಈ ವಿಮಾನ ಸೇವೆ ಸಣ್ಣ ಉದ್ದಿಮೆ, ವ್ಯಾಪಾರಗಳಿಗೆ ಉತ್ತೇಜನ ನೀಡಿಲಿದೆ. ನಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ ಎಂದು UPS ಭಾತರದ ನಿರ್ದೇಶಕರು ತಿಳಿಸಿದರು.
ದೀಪಕ್ ಶ್ರೀವಾಸ್ತವ್, UPS ಭಾರತದ ನಿರ್ದೇಶಕ.
ಈಗಾಗಲೇ ದೇವನಹಳ್ಳಿ ವಿಮಾನ ನಿಲ್ದಾಣ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ, ಕರೋನಾ ನಿಯಂತ್ರಣ, ಸ್ವಚ್ಛತೆ ಕ್ಷೇತ್ರಗಳಲ್ಲಿ ದೇಶ- ವಿದೇಶಗಳ ಪ್ರಶಸ್ತಿ ಗೌರವಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2020ರಲ್ಲಿ ದೆಹಲಿಯಲ್ಲಿ UPS ಸೇವೆ ಪ್ರಾರಂಭವಾಗಿತ್ತು. ಇದೀಗ ಬೆಂಗಳೂರು UPS ಮೂಲಕ ದಕ್ಷಿಣ ಭಾರತದ ಗೇಟ್ ವೇ ಯಾಗಿ, ಇಂಡೋ ಪೆಸಿಪಿಕ್ ವಲಯದ ವಾಣಿಜ್ಯ ಸಂಪರ್ಕ ಕೊಂಡಿಯಾಗಿ ಬೆಂಗಳೂರು & KIA ದಾಪುಗಾಲಿಡ್ತಿವೆ UPS ಸೇವೆ ಮೂಲಕ ಬೆಂಗಳೂರನ್ನು ವಿಶ್ವಕ್ಕೆ ಸ್ವಾಗತಿಸಲು ಖುಷಿಯಾಗ್ತಿದೆ ಎಂದು ಕೆಂಪೇಗೌಡAirport ಆಫೀಸರ್ ತಿಳಿಸಿದರು.
-ಸತ್ಯಕಿ ರಘುನಾಥ್, ಚೀಪ್ ಸ್ಟ್ರಾಟಜಿ ಡೆವಲಪ್ಮೆಂಟ್ ಆಫೀಸರ್ KIA.
ಅದೇನೆ ಇರಲಿ ದೆಹಲಿ ನಂತರ ದಕ್ಷಿಣ ಭಾರತದ ಬೆಂಗಳೂರು ಯೂರೋಪ್ ಮೂಲದ UPS ಸೇವೆ ಒದಗಿಸುತ್ತಿರುವ ದಕ್ಷಿಣ ಭಾರತದ ಗೇಟ್ವೇಯಾಗಿ ಅಭಿವೃದ್ಧಿ ಆಗ್ತಿರುವುದು ನಮ್ಮೆಲ್ಲರ ಹೆಮ್ಮೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: