ಕುಡಿದ ಅಮಲಿನಲ್ಲಿ ಕಾರ್ ಗ್ಲಾಸ್ ಪೀಸ್ ಪೀಸ್.!

ನಗರದ ಕತ್ರಿಗುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಹೊಡೆದು ಪುಂಡಾಟಿಕೆ ಮೆರೆದಿದ್ದಾರೆ. ನಿನ್ನೆ ಸಂಜೆ  ಸುಮಾರು 6:30 ರ ಸಮಯದಲ್ಲಿ  ಮದ್ಯದ ಅಮಲಿನಲ್ಲಿ ವಾಹನಗಳ ಮೇಲೆ ಮಚ್ಚಿನಿಂದ ಹೊಡೆದಿದ್ದಾರೆ. ಈ ಪರಿಣಾಮ ಕಾರಿನ ಗಾಜುಗಳು ಸಂಪೂರ್ಣ  ನುಚ್ಚುನೂರಾಗಿದೆ.

ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕತ್ರಿಗುಪ್ಪೆಯ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.  ಇನ್ನು ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಪುಂಡಾಟಿಕೆ ಹೆಚ್ಚುತ್ತಿದ್ದು. ರಾತ್ರಿ ವೇಳೆಯಲ್ಲಿ ತಮಗಿಷ್ಟ ಬಂದಂತೆ ಮೆರೆಯುವ ಮಿಸೆ ಚಿಗುರದ ಪುಡಿ ರೌಡಿಗಳ ರೌಡಿಸಂಗೆ ಖಾಕಿ ಕಡಿವಾಣ ಹಾಕಬೇಕಾಗಿದೆ.

ಇದನ್ನೂ ಓದಿ: ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ತೆಲ್ಕೂರ್ ಸೂಚನೆ

Please follow and like us:

Leave a Reply

Your email address will not be published. Required fields are marked *

Next Post

ದೇವಿ ಆರಾಧಕರ ಸೋಗಿನಲ್ಲಿ ಬಂದು ಮಾಂಗಲ್ಯ ಕದ್ದ ಕಳ್ಳರು ಪರಾರಿ.!

Wed Mar 24 , 2021
ದೇವಿ ಆರಾಧಕರೆಂದು ಹೇಳಿಕೊಂಡು  ವೃದ್ಧೆಯನ್ನು ಯಾಮಾರಿಸಿ  ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ. ನಗರದಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮನ ಬಳಿ ಮಡಿಕೆ ಖರೀದಿಸುವ ಸೋಗಿನಲ್ಲಿ ಬಂದು, ಮಾಂಗಲ್ಯ ಸರವನ್ನು  ಮಡಿಕೆಯಲ್ಲಿ ಹಾಕಿ ಪೂಜೆ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ, ಕಳ್ಳರನ್ನು ನಂಬಿದ ವೃದ್ಧೆ  ಮಾಂಗಲ್ಯ ಸರವನ್ನು ಮಡಿಕೆಯಲ್ಲಿ ಹಾಕಿದ್ದಾರೆ. ಇನ್ನು ಸರವನ್ನು ಕದ್ದ ಕಳ್ಳರು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಸದ್ಯ ಕಳ್ಳರಿಗಾಗಿ […]

Advertisement

Wordpress Social Share Plugin powered by Ultimatelysocial