ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ..!
ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಂದ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.
ಉಷಾ ಟಿ.ಬೇಗೂರು ಗ್ರಾಮಪಂಚಾಯಿತಿ ಪಿ.ಡಿ.ಓ(PDO), 11 ಕೋಟಿಯಷ್ಟು ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದಿತ್ತು ಇಂದರಿಂದ ಉಷಾರವರಿಗೆ ಸೇರಿದ ಅನೇಕ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ತನ್ನ ಹೆಸರಲ್ಲಿ ಮಾತ್ರವಲ್ಲದೆ ಪತಿ, ಮಗಳು, ಭಾವ ಸೇರಿದಂತೆ ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ಶ್ರೀನಾಥ್ ಜೋಶಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ಕಲಂ 12, 13,(1),(b) ಜೊತೆಗೆ 13(2) ಪಿಸಿ ಅಕ್ಟ್ 1988 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಷಾರವರಿಗೆ ಸೇರಿದ ಎಲ್ಲಾ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.ಬೆಂಗಳೂರಿನ ಮಲ್ಲೇಶ್ವರಂ ಅಪಾರ್ಟ್ಮೆಂಟ್, ಪ್ಲಾಟ್ಸ್ , ವಾಣಿಜ್ಯ ಸಂಕೀರ್ಣ ಕಟ್ಟಡಗಳು ಸೇರಿದಂತೆ ಅನೇಕ ಕಡೆಗಳಲ್ಲಿ ದಾಳಿ ಮಾಡಿದ್ದಾರೆ, ಅಷ್ಟೇಲ್ಲದೆ ಕೆಲ ವಸ್ತುಗಳು ಮತ್ತು ದಾಖಲೆಗಳು ಲೋಕಾಯುಕ್ತ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
https://play.google.com/store/apps/details?id=com.speed.newskannada