ಬಸವನ ಬಾಗೇವಾಡಿಯಲ್ಲಿ ಕಳೆದ ಒಂದು ವರ್ಷದಿಂದ ಪುರಸಭೆ ಚುನಾವಣೆಯು ಕೆಲವು ಕಾನೂನು ಅಡಚಣೆಗಳಿಂದ ಕೋರ್ಟಿನಲ್ಲಿ ತಕರಾರು ಅರ್ಜಿ ಇರುವುದರಿಂದ ಇಲ್ಲಿಯವರೆಗೆ ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು. ಆದ ಕಾರಣ ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯು ಕಾಂಗ್ರೆಸ್ ಪಕ್ಷದ ಶಾಸಕರಾದ ಶಿವಾನಂದ್ ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಶ್ರೀಮತಿ ಅನ್ನಪೂರ್ಣ ಸಂಜು ಕಲ್ಯಾಣಿ ಅಧ್ಯಕ್ಷರಾಗಿ ಹಾಗೂ ಶ್ರೀಮತಿ.ಲಕ್ಷ್ಮೀಬಾಯಿ ಶರಣಪ್ಪ ಬೆಲ್ಲದ ಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಎಸ್ ಪಾಟೀಲ್ ತಾಲೂಕು ತಹಸೀಲ್ದಾರ್ ಎಂ ಎ ಬಳಗಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ ಸಿ ಪಟ್ಟಣ ಶೆಟ್ಟಿ.ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರಗೌಡ ಪಾಟೀಲ. ಬಸನಗೌಡ ದೇಸಾಯಿ. ಮೈನಾರಿಟಿ ಅಧ್ಯಕ್ಷ ಶೇಖರ್ ಗೊಳಸಂಗಿ. ಪುರಸಭೆ ನಗರದ ಎಲ್ಲಾ ವಾರ್ಡಿನ ಸದಸ್ಯರ ಒಮ್ಮತದ ಮೂಲಕ ಒಟ್ಟು ಸದಸ್ಯರ ಬಲ ಬಾಲ ಕಾಂಗ್ರೆಸ್ -13 ಬಿಜೆಪಿ-6 ಪಕ್ಷೇತರ-4 ಇದು ಪಕ್ಷೇತರ ಮೂಲದ ನಾಲ್ಕು ಜನ ಸದಸ್ಯರೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಇದನ್ನ ಓದಿ:ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ