ಬಸವನ ಬಾಗೇವಾಡಿ ಪುರಸಭೆ ಚುನಾವಣೆ

ಬಸವನ ಬಾಗೇವಾಡಿಯಲ್ಲಿ  ಕಳೆದ ಒಂದು ವರ್ಷದಿಂದ  ಪುರಸಭೆ ಚುನಾವಣೆಯು ಕೆಲವು ಕಾನೂನು ಅಡಚಣೆಗಳಿಂದ ಕೋರ್ಟಿನಲ್ಲಿ ತಕರಾರು ಅರ್ಜಿ ಇರುವುದರಿಂದ ಇಲ್ಲಿಯವರೆಗೆ ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು. ಆದ ಕಾರಣ ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯು ಕಾಂಗ್ರೆಸ್ ಪಕ್ಷದ ಶಾಸಕರಾದ ಶಿವಾನಂದ್ ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಶ್ರೀಮತಿ ಅನ್ನಪೂರ್ಣ ಸಂಜು ಕಲ್ಯಾಣಿ ಅಧ್ಯಕ್ಷರಾಗಿ ಹಾಗೂ ಶ್ರೀಮತಿ.ಲಕ್ಷ್ಮೀಬಾಯಿ ಶರಣಪ್ಪ ಬೆಲ್ಲದ ಯವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆ ಸಂದರ್ಭದಲ್ಲಿ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಎಸ್  ಪಾಟೀಲ್ ತಾಲೂಕು ತಹಸೀಲ್ದಾರ್ ಎಂ ಎ ಬಳಗಾರ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐ ಸಿ ಪಟ್ಟಣ ಶೆಟ್ಟಿ.ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚಂದ್ರಶೇಖರಗೌಡ ಪಾಟೀಲ. ಬಸನಗೌಡ ದೇಸಾಯಿ. ಮೈನಾರಿಟಿ ಅಧ್ಯಕ್ಷ  ಶೇಖರ್ ಗೊಳಸಂಗಿ. ಪುರಸಭೆ  ನಗರದ ಎಲ್ಲಾ ವಾರ್ಡಿನ ಸದಸ್ಯರ ಒಮ್ಮತದ ಮೂಲಕ ಒಟ್ಟು ಸದಸ್ಯರ ಬಲ ಬಾಲ ಕಾಂಗ್ರೆಸ್ -13 ಬಿಜೆಪಿ-6 ಪಕ್ಷೇತರ-4 ಇದು ಪಕ್ಷೇತರ ಮೂಲದ ನಾಲ್ಕು ಜನ  ಸದಸ್ಯರೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಇದನ್ನ ಓದಿ:ಅಪ್ಪುಗೆ ಅಭಿನಂದನಾ ಪತ್ರ ಬರೆದ ಸರ್ಕಾರಿ ಶಾಲೆ

Please follow and like us:

Leave a Reply

Your email address will not be published. Required fields are marked *

Next Post

ಪಟಾಕಿ ನಿಷೇಧ ಮಾಡುವಂತೆ ಒತ್ತಾಯ

Thu Nov 5 , 2020
ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ  –  ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ನಿಂದ ಮನವಿ  ಪಟಾಕಿ ನಿಷೇಧ ಕೋರಿರುವ ಮೇಲ್ಮನವಿಯ ತ್ವರಿತ ವಿಚಾರಣೆಗೆ ಒತ್ತು ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಕರ್ನಾಟಕವೂ ಸೇರಿದಂತೆ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆದರ್ಶ ಕುಮಾರ್‌ […]

Advertisement

Wordpress Social Share Plugin powered by Ultimatelysocial