BBMP ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿ; ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದ ಹೈಕೋರ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿಗೊಳಿಸಿದೆ.ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಪದೇ ಪದೇ ಗೈರಾಗುತ್ತಿದ್ದು, ಇಂದು ನಡೆದ ಅರ್ಜಿ ವಿಚಾರಣೆ ವೇಳೆಯೂ ಅನಾರೋಗ್ಯ ನೆಪವೊಡ್ಡಿ ವಿಚಾರಣೆಗೆ ಹಾಜರಾಗಿರಲಿಲ್ಲ.ಈ ಬಗ್ಗೆ ಪಾಲಿಕೆ ಪರ ವಕೀಲ ಶ್ರೀನಿಧಿ ಕೋರ್ಟ್ ಗೆ ಮಾಹಿತಿ ನೀಡುತ್ತಿದ್ದಂತೆ ಕೆಂಡಾಮಂಡಲರಾದ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, ಮುಖ್ಯ ಎಂಜಿನಿಯರ್ ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದು ಬೆಂಗಳೂರು ಪೊಲಿಸ್ ಆಯುಕ್ತರಿಗೆ ಸೂಚನೆ ನೀಡಿದರು. ಇದೇ ವೇಳೆ ಚೀಫ್ ಎಂಜಿನಿಯರ್ ಪ್ರಹ್ಲಾದ್ ವಿರುದ್ಧ ವಾರಂಟ್ ಜಾರಿ ಮಾಡಿದ ಹೈಕೋರ್ಟ್ ಪೀಠ, ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ಹಿಂದೇಟು ಹಾಕಲ್ಲ. ಜಾಮೀನು ರಹಿತ ವಾರಂಟ್ ಜಾರಿ ನಮಗೆ ಕಷ್ಟವಲ್ಲ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಬಾಯ್‌ಫ್ರೆಂಡ್‌ ಬಾಡಿಗೆಗೆ ಇದ್ದಾನೆ' ಎಂದು ಭಿತ್ತಿಪತ್ರ ಹಿಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿ..!

Tue Feb 15 , 2022
ವ್ಯಾಲೆಂಟೈನ್ಸ್‌ ದಿನ ಎಂದರೆ ಅದು ಪ್ರೀತಿ ಮಾಡುವವರಿಗೆ ಅವರ ಪ್ರೇಮ ನಿವೇದನೆಗೆ ಇರುವ ವರ್ಷದಲ್ಲೇ ಒಂದು ಸದಾವಕಾಶದ ದಿನ. ಯುವಕರು ಈ ಸಂದರ್ಭವನ್ನು ತಮ್ಮ ನೆಚ್ಚಿನ ಯುವತಿಗೆ ಪ್ರೊಪೋಸ್‌ ಮಾಡಲು ಬಳಸಿಕೊಳ್ಳುತ್ತಾರೆ. ಯುವತಿಯರು ಕೂಡ, ಆದರೆ ಭಾರತದಲ್ಲಿ ಯುವತಿಯರಿಂದ ಪ್ರೇಮ ನಿವೇದನೆ ಪ್ರಸ್ತಾವನೆ ಕಡಿಮೆಬಿಹಾರದ ದರ್ಭಂಗಾ ಎಂಜಿನಿಯರಿಂಗ್‌ ಕಾಲೇಜಿನ 5ನೇ ಸೆಮಿಸ್ಟರ್‌ ವಿದ್ಯಾರ್ಥಿ ಪ್ರಿಯಾಂಶು ಮಾತ್ರ ಫೆ.14ರಂದು ‘ಬಾಯ್‌ಫ್ರೆಂಡ್‌ ಬಾಡಿಗೆಗೆ ಲಭ್ಯ’ ಎಂಬ ಪೋಸ್ಟರ್‌ ಹಿಡಿದುಕೊಂಡು ನಿಂತುಬಿಟ್ಟಿದ್ದಾನೆ! ಹೌದು, ಆತನಿಗೆ […]

Advertisement

Wordpress Social Share Plugin powered by Ultimatelysocial