ನೂತನ ಮದ್ಯ ನೀತಿ ಬಿಜೆಪಿಗೆ ಅಧಿಕಾರ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ತ್ವರಿತವಾಗಿ ಮದ್ಯ ನೀತಿ ಜಾರಿಗೊಳಿಸಿದರೆ, ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಅನುಮಾನ ಇಲ್ಲ ಎಂದು ಪಕ್ಷದ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.ಭೋಪಾಲ್‌ನ ಅಯೋಧ್ಯ ನಗರದಲ್ಲಿರುವ ದೇವಾಲಯವೊಂದಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಒಂದುವೇಳೆ ನಿಯಂತ್ರಿತ ಮದ್ಯ ನೀತಿ ಜಾರಿಯಾದರೆ, ಬಿಜೆಪಿಯು ೨೦೦೩ರಲ್ಲಿ ಸಾಧಿಸಿದ ದಾಖಲೆಯ ಗೆಲುವನ್ನು ಪುನರಾವರ್ತಿಸಲಿದೆ ಎಂದು ಭವಿಷ್ಯ ನುಡಿದರು.ಇಲ್ಲಿನ ಸರ್ಕಾರವು ಹೊಸ ಮದ್ಯ ನೀತಿಯನ್ನು ಘೋಷಿಸಲು ಸಿದ್ಧತೆ ನಡೆಸಿದೆ. ಆದರೆ, ಯಾವಾಗ ಎಂದು ದಿನಾಂಕ ಪ್ರಕಟಿಸಿಲ್ಲ. ಸಾಮಾನ್ಯವಾಗಿ ಈ ನೀತಿಯು ಜನವರಿ ಅಂತ್ಯದಲ್ಲಿ ಘೋಷಣೆಯಾಗುತ್ತದೆ ಎಂದರು.ಸರ್ಕಾರವು ಪ್ರತಿವರ್ಷ ಪ್ರಕಟಿಸುವ ಮದ್ಯ ನೀತಿಯಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಬೇಕು. ಜನರನ್ನು ವ್ಯಸನಮುಕ್ತಗೊಳಿಸಲು ಉತ್ತೇಜಿಸುವ ನಿಯಂತ್ರಣಗಳನ್ನು ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ನಾನು ಯಾವತ್ತೂ ಸಂಪೂರ್ಣ ಮದ್ಯ ನಿಷೇಧಕ್ಕೆ ಬೇಡಿಕೆ ಇಟ್ಟಿಲ್ಲ. ಅದು ನನ್ನ ಹಿಡಿತದಲ್ಲಿ ಇದ್ದಿದ್ದರೆ, ಸಂಪೂರ್ಣ ನಿಷೇಧ ಹೇರುತ್ತಿದ್ದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮೇಲೆ ಪೂರ್ಣ ವಿಶ್ವಾಸವಿದೆ. ಹೊಸ ಮದ್ಯ ನೀತಿ ಘೋಷಣೆಗಾಗಿ ಜನವರಿ ೩೧ರ ವರೆಗೆ ಕಾಯುತ್ತೇನೆ ಎಂದು ಉಮಾ ಭಾರತಿ ಹೇಳಿದ್ದಾರೆ.ಅದು ಅಲ್ಲದೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾ ಭಾರತಿ ಈ ಹಿಂದೆ ದೇವಾಲಯದ ಬಳಿ ಮದ್ಯದ ಅಂಗಡಿಗಳನ್ನು ತೆರೆಯುವುದನ್ನು ವಿರೋಧಿಸಿದ್ದರು. ಇನ್ನೂ, ಮಧ್ಯಪ್ರದೇಶ ವಿಧಾನಸಭೆಗೆ ಇದೇ ವರ್ಷ (೨೦೨೩ರ) ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದು ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನಲೆ.

Mon Jan 30 , 2023
ಇಂದು ಭಾರತ್ ಜೋಡೋ ಪಾದಯಾತ್ರೆ ಸಮಾರೋಪ ಹಿನ್ನಲೆ. ‘ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ದ್ವಜಾರೋಹಣ. ರಾಹುಲ್ ಗಾಂಧಿ ನೇತೃತ್ವದಲ್ಲಿ ಜರುಗುತ್ತಿರುವ ಐತಿಹಾಸಿಕ ಭಾರತ್ ಜೋಡೊ ಯಾತ್ರೆ. ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಸಿಎಂ ದ್ಯಾವಪ್ಪ. ಸಿಎಂ ದ್ಯಾವಪ್ಪ, ಕಾಂಗ್ರೆಸ್ ಜಿಲ್ಲಾ ವಕ್ತಾರ. ರಾಜ್ಯದಿಂದ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸಿರುವ ದ್ಯಾವಪ್ಪ. 145 ದಿನಗಳ ಕಾಲ 3470 ಕಿ.ಮಿ. ಹೆಜ್ಜೆ ಹಾಕಿರುವ ಸಿಎಂ ದ್ಯಾವಪ್ಪ. ಶ್ರೀನಗರದಲ್ಲಿ ನಡೆಯುತ್ತಿರುವ […]

Advertisement

Wordpress Social Share Plugin powered by Ultimatelysocial