ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿ ರಂಗನಬೆಟ್ಟದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಲಿಗರ ಕಾಲೋನಿಗಳಿಗೆ ತೆರಳಿ ಶಾಸಕ ಎನ್.ಮಹೇಶ್ ರವರು ಪಿ ಬಿಜೆಪಿ ಬಾವುಟ ಕಟ್ಟುವ ಮೂಲಕ ಬೂತ್ ವಿಜಯ ಅಭಿಯಾನದ ಬಗ್ಗೆ ತಿಳಿಸಿದರು……
ನಂತರ ಶಾಸಕ ಎನ್.ಮಹೇಶ್ ಮಾತನಾಡಿ ವಿಧಾನಸಭೆಯ ಮುಂದಿನ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧಿಸಲು ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ‘ಬೂತ್ ವಿಜಯ’ ಅಭಿಯಾನವು ಇದೇ ತಿಂಗಳ 12 ರವರೆಗೆ ನಡೆಯಲಿದೆ……
ಇಂದು ಬಿಳಿಗಿರಿ ರಂಗನ ಬೆಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜಗಳನ್ನು ಹಾರಿಸುವುದಕ್ಕೆ ಚಾಲನೆ ನೀಡಲಾಯಿತು….
ಪ್ರತಿಯೊಂದು ಬೂತ್ನಲ್ಲಿ ವಿರೋಧ ಪಕ್ಷಗಳಿಗಿಂತ ಅಧಿಕ ಮತಗಳನ್ನು ಗಳಿಸಲು ಕಾರ್ಯಕರ್ತ
ರನ್ನು ಅಣಿಗೊಳಿಸುವುದು ಈ ಅಭಿಯಾನದ ಉದ್ದೇಶ ವಾಗಿದೆ…
ಬೂತ್ ಸಮಿತಿ ರಚನೆ, ಪೇಜ್ ಪ್ರಮುಖ್, ವಾಟ್ಸ್ಆ್ಯಪ್ ಗ್ರೂಪ್ ರಚನೆ, ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಮನೆಗೆ ತಲುಪಿಸುವುದು ಮತ್ತು ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವುದು ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿರುತ್ತದೆ.ಪ್ರತಿ ಬೂತ್ನಲ್ಲಿಯೂ ಒಳ್ಳೆಯ ತಂಡ ರೂಪಿಸಲಾಗುತ್ತಿದೆ ಯಳಂದೂರು ತಾಲ್ಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಮಹೇಶ್ ರವರು ಈ ಅಭಿಯಾನವನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ,ನನ್ನ ಕ್ಷೇತ್ರದ ಎಲ್ಲಾ ಜನತೆ ಈ ಅಭಿಯಾನವನ್ನು ಯಶಸ್ವಿ ಗೊಳಿಸಿ ಎಂದು ಹೇಳಿದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada