ಗದಗನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಸಮಾವೇಶ. ನಾವೂ ಸಹ ನಾಳೆ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡ್ತೆವೆ. ಬಿಜೆಪಿ ಪ್ರಣಾಳಿಕೆ ಮಾಡೋದು ಬೋಗಸ್. ನಾವು ಬಿಡುಗಡೆ ಮಾಡುವ ಪ್ರಣಾಳಿಕೆ ಅನುಷ್ಠಾನ ಮಾಡುವಂಥದ್ದು. ಬಿಜೆಪಿಯವ್ರು ಬೋಗಸ್ ಭರವಸೆಗಳನ್ನ ಕೊಡ್ತಾರೆ. ನಮಗೂ ಹಾಗೂ ಬಿಜೆಪಿಯವ್ರಿಗೆ ಇರುವ ವ್ಯತ್ಯಾಸ ಇದೆ. ಕಳೆದ ಬಾರಿ 2018 ರಲ್ಲಿ 600 ಭರಸವೆಗಳನ್ನ ಕೊಟ್ಟಿದ್ರು. ಆದರೆ ಕೇವಲ 55 ಭರವಸೆಗಳನ್ನ ಮಾತ್ರ ಅನುಷ್ಠಾನ ಮಾಡಿದ್ರು. ನಾವು 165 ಭರಸವೆಗಳನ್ನ ಕೊಟ್ಟಿದ್ದೇವು. ಅದರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೇವೆ.
ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ. ಪ್ರಧಾನಿ ಮೋದಿಜಿಗೆ ಪ್ರಿಯಾಂಕ ಖರ್ಗೆ ನಾಲಾಯಕ ಮಗ ಶಬ್ದ ಬಳಸಿರೋ ವಿಚಾರ, ಖರ್ಗೆಯವ್ರು ಆರೆಸ್ಸೆಸ್ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೆ. ಅದಕ್ಕೆ ವಿಷಾದ ಸಹ ವ್ಯಕ್ತಪಡಿಸಿದ್ದಾರೆ. ಯತ್ನಾಳ ಸಹ ಸೋನಿಯಾ ಗಾಂಧಿಗೆ ವಿಷಕನ್ಯೆ ಎಂದಿದ್ದಾರೆ. ಇದಕ್ಕೇನು ಹೇಳಬೇಕು. ನರೇಂದ್ರ ಮೋದಿ ಇದನ್ನ ಖಂಡಿಸಿದಾರಾ? ಬಿಜೆಪಿಯವ್ರಿಗೆ ಯಾವ ಸಂಸ್ಕೃತಿಯೂ ಇಲ್ಲ. ದ್ವೇಷವನ್ನ ಹುಟ್ಟುಹಾಕೋದಷ್ಟೇ ಅವರು ಕಲಿತಿದ್ದಾರೆ. ಬೆಳ್ಳಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.
https://play.google.com/store/apps/details?id=com.speed.newskannada