ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿಶೀಟರ್ ಸುನೀಲ ಕಾಣಿಸಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವಾಗಲೇ, ವಸತಿ ಸಚಿವ ವಿ.ಸೋಮಣ್ಣ ಮನೆಯಲ್ಲಿರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಪ್ರತ್ಯಕ್ಷನಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿಯದ್ದು ಗೂಂಡಾ ರಾಜಕಾರಣ ಹಾಗಾಗಿ ಫೈಟರ್ ರವಿಯನ್ನ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರು ಕೇವಲವಾಗಿ ಮಾತನಾಡಿದ್ದರು. ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಗರಂ ಆಗಿದ್ದು ರೌಡಿಗಳಿಗೆ ಬಿಜೆಪಿ ಎಂದೂ ಬೆಂಬಲಿಸಿಲ್ಲ. ಫೈಟರ್ ರವಿ ಬಿಜೆಪಿ ಸೇರಿದ್ದು ನಮ್ಮ ಗಮನಕ್ಕೆ ಬಂದೇ ಇಲ್ಲ. ಅಂತಹ ಪ್ರಕರಣ ನಡೆದಿದ್ದರೆ ಪಕ್ಷದ ಅಧ್ಯಕ್ಷರು ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು. ಗೋಂಡಾ ರಾಜಕಾರಣ ಏನಿದ್ರೂ ಕಾಂಗ್ರೆಸ್ನವರದ್ದು. ಕಾಂಗ್ರೆಸ್ ಅರ್ಕಾರ ಇದ್ದಾಗಲೇ ರೌಡಿಗಳು ಹೆಚ್ಚಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.