ರೌಡಿಗಳಿಗೆ ಕುಮ್ಮಕ್ಕು ಕೊಟ್ಟಿದ್ದೇ ಕಾಂಗ್ರೆಸ್‌ – ಆರ್‌ ಅಶೋಕ್‌ ವಾಗ್ದಾಳಿ

ಬಿಜೆಪಿ ಕಾರ್ಯಕ್ರಮದಲ್ಲಿ ರೌಡಿಶೀಟರ್‌ ಸುನೀಲ ಕಾಣಿಸಕೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವಾಗಲೇ, ವಸತಿ ಸಚಿವ ವಿ.ಸೋಮಣ್ಣ ಮನೆಯಲ್ಲಿರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಪ್ರತ್ಯಕ್ಷನಾಗಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.   ಬಿಜೆಪಿಯದ್ದು ಗೂಂಡಾ ರಾಜಕಾರಣ ಹಾಗಾಗಿ ಫೈಟರ್‌ ರವಿಯನ್ನ ಬಿಜೆಪಿಗೆ  ಸೇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಬಗ್ಗೆ ಕಾಂಗ್ರೆಸ್ಸಿಗರು ಕೇವಲವಾಗಿ ಮಾತನಾಡಿದ್ದರು. ಇದಕ್ಕೆ ಕಂದಾಯ ಸಚಿವ ಆರ್‌ ಅಶೋಕ್‌ ಗರಂ ಆಗಿದ್ದು ರೌಡಿಗಳಿಗೆ ಬಿಜೆಪಿ ಎಂದೂ ಬೆಂಬಲಿಸಿಲ್ಲ. ಫೈಟರ್‌ ರವಿ ಬಿಜೆಪಿ ಸೇರಿದ್ದು ನಮ್ಮ ಗಮನಕ್ಕೆ ಬಂದೇ ಇಲ್ಲ. ಅಂತಹ ಪ್ರಕರಣ ನಡೆದಿದ್ದರೆ ಪಕ್ಷದ ಅಧ್ಯಕ್ಷರು ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು. ಗೋಂಡಾ ರಾಜಕಾರಣ ಏನಿದ್ರೂ ಕಾಂಗ್ರೆಸ್ನವರದ್ದು. ಕಾಂಗ್ರೆಸ್‌ ಅರ್ಕಾರ ಇದ್ದಾಗಲೇ ರೌಡಿಗಳು ಹೆಚ್ಚಾಗಿದ್ದು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಅಗ್ನಿ ಸಾಕ್ಷಿ ಸೀರಿಯಲ್ಗೆ ಮತ್ತೊಂದು ಗರಿಮೆ -ರೀಮೇಕ್‌ ಆಯ್ತು ಅಗ್ನಿಸಾಕ್ಷಿ ಧಾರಾವಾಹಿ

Fri Dec 2 , 2022
ಕಲರ್ಸ್‌ ಕನ್ನಡ ಚಾನಲ್ನಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿ ಮನೆ ಮನೆ ಮಾತಾಗಿದ್ದ ಧಾರಾವಾಹಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಧಾರಾವಾಹಿ ಅಗ್ನಿಸಾಕ್ಷಿ. ಈ ಸೀರಿಯಲ್‌ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆದ್ದಿತ್ತು. 7 ವರ್ಷಗಳಲ್ಲಿ ಕೆಲವೊಂದು ಪಾತ್ರಧಾರಿಗಳನ್ನ ಬದಲಿಸಿದರಾದರೂ ಮತ್ತೆ ಬಂದ ಪಾತ್ರಧಾರಿಗಳನ್ನ ಜನ ಅಷ್ಟೇ ಪ್ರೀತಿಯಿಂದ ಮೆಚ್ಚಿಕೊಂಡ್ರು. ಮುಖ್ಯವಾಗಿ ಧಾರಾವಾಹಿಯಲ್ಲಿ ವಿಲನ್‌ಪಾತ್ರಧಾರಿಯಾಗಿದ್ದ ಚಂದ್ರಿಕಾ ಪಾತ್ರ […]

Advertisement

Wordpress Social Share Plugin powered by Ultimatelysocial