ಬಾಲಿವುಡ್ ಚಿತ್ರರಂಗದ ಖ್ಯಾತ ಕಲಾವಿದರು ಇದೀಗ ಸ್ಯಾಂಡಲ್ ವುಡ್ ನತ್ತ ಮುಖ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ನಟಿಸಿದ್ರೆ ನಮ್ಮ ವ್ಯಾಲ್ಯು ಜಾಸ್ತಿ ಆಗುತ್ತೆ ಎಂಬ ಕಾಲವಿದು. ಈ ಹಿಂದೆ ಕೆಜಿಎಫ್ ಸಿನಿಮಾದಲ್ಲಿ ಅಬ್ಬರಿಸಿದ್ದ ನಟ ಸಂಜಯ್ ದತ್ ಇದೀಗ ಕೆಡಿಗಾಗಿ ಮತ್ತೆ ಗಾಂಧಿನಗರಕ್ಕೆ ಬರ್ತಿದ್ದಾರೆ.
ಈಗ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡ್ತಿರೋ ಕೆಡಿ ಚಿತ್ರದಲ್ಲಿ ನಟಿಸಲು ಸಂಜಯ್ ದತ್ ಬರೋಬ್ಬರಿ ಒಂದೂವರೆ ತಿಂಗಳು ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಕೆವಿಎನ್ ನಿರ್ಮಾಣ ಸಂಸ್ಥೆ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ಜೊತೆಗೆ ಬಾಲಿವುಡ್ನಲ್ಲೂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅಲ್ಲದೆ ಯಶ್ ನಟನೆಯ ಮುಂದಿನ ಸಿನಿಮಾಗೂ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಸದ್ಯ ಜೋಗಿ ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಅದ್ದೂರಿಯಾಗಿ ಸಿನಿಮಾ ಮಾಡಲು ಸಜ್ಜಾಗಿದೆ ವೆಂಕಟ್ ನಾರಾಯಣ್ ಕೊಣಂಕಿ ಒಡೆತನದ ಕೆ.ವಿ.ಎನ್ ಸಂಸ್ಥೆ. ಈಗ ಇದೇ ಕೆವಿಎನ್ ನಿರ್ಮಾಣದ ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕೆಡಿ ಚಿತ್ರಕ್ಕಾಗಿ ಮಾಯನಗರಿ ಮುಂಬೈನಿಂದ ಖಡಕ್ ಖಳನಾಯಕ್ ಬೆಂಗಳೂರಿಗೆ ಬರ್ತಿದ್ದಾರೆ.
ಕೆಜಿಎಫ್ ಸಿನಿಮಾದಿಂದ ಸಿಕ್ಕ ಯಶಸ್ಸಿನಿಂದ ಖುಷಿಯಾಗಿರುವ ಸಂಜು ಬಾಯ್ ಕನ್ನಡ ಸಿನಿಮಾ ರಂಗದ ಮೇಲೆ ಅಕ್ಕರೆ ಅಭಿಮಾನವನ್ನ ಇಟ್ಟುಕೊಂಡಿದ್ದಾರೆ. ಜೋಗಿ ಪ್ರೇಮ್ ಮಾಡಿಕೊಂಡಿರುವ ಕಥೆ, ಕೆವಿಎನ್ ಅಂತಹ ಸಂಸ್ಥೆ ಖ್ಯಾತಿಯನ್ನ ಮೆಚ್ಚಿಕೊಂಡಿರುವ ‘ಮುನ್ನಾಭಾಯಿ’ ದೊಡ್ಡ ಕಾಲ್ ಶೀಟ್ ಅನ್ನೆ ಕೆಡಿ ಚಿತ್ರತಂಡಕ್ಕೆ ನೀಡಿದ್ದಾರೆ.
https://play.google.com/store/apps/details?id=com.speed.newskannada