ಸಿಎಂ ಬೊಮ್ಮಾಯಿ ಈಗ ಪಟ್ಟಿ ಬಿಡುಗಡೆಗೆ ಸಿದ್ದರಾಗಿದ್ದಾರೆ.

 

ಬೆಂಗಳೂರು: ನಿಗಮ- ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ರಾಜೀನಾಮೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮೌಖಿಕ ಸೂಚನೆ ನೀಡಿರುವುದು ಬಿ.ಎಸ್.ಯಡಿಯೂರಪ್ಪ ಬಣದ ಕಣ್ಣು ಕೆಂಪಾಗಿಸಿದೆ.

ಯಡಿಯೂರಪ್ಪ ವಿದೇಶ ಪ್ರವಾಸ ತೆರಳಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆಪ್ತ ಸಚಿವರ ಜತೆ ಸೇರಿ ನಿಗಮ – ಮಂಡಳಿಗೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಹೊಸ ಪಟ್ಟಿ ತಯಾರಿಸಿದ್ದರು.

ಯಡಿಯೂರಪ್ಪ ಆಗಮನದವರೆಗೂ ಕಾಯ್ದ ಸಿಎಂ ಬೊಮ್ಮಾಯಿ ಈಗ ಪಟ್ಟಿ ಬಿಡುಗಡೆಗೆ ಸಿದ್ದರಾಗಿದ್ದಾರೆ.

ನಿರ್ಗಮನಗೊಳ್ಳುವವರ ಪಟ್ಟಿಯಲ್ಲಿ ಯಡಿಯೂರಪ್ಪ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರಾಜಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ಮುಖಂಡರಿಗೆ ಯಡಿಯೂರಪ್ಪ ಕಾಲದಲ್ಲಿ ನಿಗಮ- ಮಂಡಳಿ ಸ್ಥಾನ ನೀಡಲಾಗಿತ್ತು.

ಇಂದು ಬೆಳಗ್ಗೆ 10.30 ರ ಸುಮಾರಿಗೆ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಇದೆ‌. ಆದರೆ ಆರು ತಿಂಗಳು ಭಾಗ್ಯಕ್ಕಾಗಿ ಎಲ್ಲರಿಗೂ ಬೇಸರ ಸೃಷ್ಟಿಸುವುದು ಏಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ; ಮೂಡಲಗಿ ಪೊಲೀಸರಿಂದ ಮೂವರು ಖತರ್ನಾಕ್ ಬೈಕ್ ಕಳ್ಳರ ಬಂಧನ

Tue Jul 12 , 2022
ಮೂಡಲಗಿ ಪೊಲೀಸರಿಂದ ಮೂವರು ಖತರ್ನಾಕ್ ಬೈಕ್ ಕಳ್ಳರ ಬಂಧನ ಮೂವರು ಬೈಕ್ ಕಳ್ಳರ ಬಂಧಿಸಿ 9 ಬೈಕ್ ವಶಪಡಿಸಿಕೊಂಡ ಪೊಲೀಸರು 5 ಲಕ್ಷ 10 ಸಾವಿರ ಮೌಲ್ಯದ 9 ಬೈಕ್ ವಶಪಡಿಸಿಕೊಂಡ ಪೊಲೀಸರು ಬೆಳಗಾವಿ ಬಾಗಲಕೋಟೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ಖದೀಮರು ಬೈಕ್ ಕದ್ದು ನಂಬರ್ ಪ್ಲೇಟ್ ತಗೆದು ಓಡಿಸುತ್ತಿದ್ದ ಖದೀಮರು ಪೊಲೀಸರ ತಪಾಸಣೆ ವೇಳೆ ಸಿಕ್ಕಿಹಾಕಿಕೊಂಡ ಬೈಕ್ ಕಳ್ಳರು ಆನಂದ ಚೌಗಲಾ(25) ಮಲ್ಲಿಕಾರ್ಜುನ್ ಬೀಸನಕೊಪ್ಪ(27) […]

Advertisement

Wordpress Social Share Plugin powered by Ultimatelysocial