‘ಬೊಂಬಾಟ್ ಭೋಜನ’ದಲ್ಲಿ ಅಳಿಯ ಪಿಎಂ ಆಗಿದ್ದರ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು?.

 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಬೊಂಬಾಟ್ ಭೋಜನ’ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಾಗಿದೆ. ಧಾರಾವಾಹಿಗಳ ನಡುವೆ ಬೊಂಬಾಟ್ ಭೋಜನ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ಹೆಂಗಳೆಯರಿಗೆ ಈ ಶೋ ಅಂದ್ರೆ ಇನ್ನಿಲ್ಲದ ಪ್ರೀತಿ. ಅದಕ್ಕೆ ಹೆಚ್ಚಿನ ಕಾರಣವೂ ಸಿಹಿಕಹಿ ಚಂದ್ರು.ಅವರ ನಿರೂಪಣಾ ಶೈಲಿ, ಅವರ ಮಾತುಗಾರಿಕೆ ಎಲ್ಲದಕ್ಕೂ ಮಂದಿ ಫಿದಾ ಆಗಿದ್ದಾರೆ.ಬೊಂಬಾಟ್ ಭೋಜನದಲ್ಲಿ ಹಲವು ವಿಭಿನ್ನ ಖಾದ್ಯಗಳನ್ನು ಸಿಹಿ ಕಹಿ ಚಂದ್ರು ತೋರಿಸುತ್ತಾ ಹೋಗುತ್ತಾರೆ. ಅದರಲ್ಲೂ ಇತ್ತಿಚೆಗೆ ಅಮೆರಿಕಾಗೆ ಹೋಗಿ, ಅಲ್ಲಿನ ಅದ್ಭುತ ಸ್ಥಳಗಳಲ್ಲೂ ಅಡುಗೆ ಮಾಡಿ, ನೋಡುಗರಿಗೆ ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆ ಪ್ರೋಗ್ರಾಂ ನೀಡಿದ್ದರು.ಈಗ ಮಹಿಳಾ ದಿನಾಚರಣೆಗಾಗಿ ಎಲ್ಲರೂ ಇಷ್ಟಪಡುವಂತ ಎಪಿಸೋಡ್ ಒಂದನ್ನು ಮಾಡಿದ್ದಾರೆ. ಸದ್ಯ ಅದರ ಝಲಕ್ ಎಂಬಂತೆ ಪ್ರೋಮೋ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.ಅಡುಗೆ ಕಲಿತಿರುವವರಿಗೆ, ಕಲಿಯುವವರಿಗೆ, ಕಲಿಯಬೇಕು ಎಂದುಕೊಂಡವರಿಗೆ, ರುಚಿ ರುಚಿಯಾದದ್ದನ್ನು ಬಯಸುವವರಿಗೆ, ವೆರೈಟಿ ನಿರೀಕ್ಷೆ ಮಾಡುವವರಿಗೆ ಸಿಹಿ ಕಹಿ ಚಂದ್ರು ದಿ ಬೆಸ್ಟ್ ಪರ್ಸನ್. ಎಲ್ಲಾ ರೀತಿಯಾದ ಅಡುಗೆಯನ್ನು ಪಟಾಪಟ್ ಅಂತ ಸಿಂಪಲ್ ಆಗಿ ಹೇಳಿಕೊಟ್ಟು ಬಿಡುತ್ತಾರೆ. ಹೀಗಾಗಿ ಹೆಂಗಳೆಯರಿಗೆಲ್ಲಾ ‘ಬೊಂಬಾಟ್ ಭೋಜನ’ ಅಂದ್ರೆ ಮಿಸ್ ಮಾಡದೇ ನೋಡುವಂತ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಸ್ಪೆಷಲ್ ಎನಿಸುವಂತ ಗೆಸ್ಟ್ ಗಳನ್ನೆ ಕರೆಸುತ್ತಾ ಇರುತ್ತಾರೆ. ಅವರಿಂದ ಅಡುಗೆ ಮಾಡಿಸುವುದಲ್ಲದೆ, ಅವರ ಕಥೆಗಳನ್ನೆಲ್ಲಾ ಕೇಳುತ್ತಾ, ಕಾರ್ಯಕ್ರಮಕ್ಕೊಂದು ಹೊಸ ಮೆರುಗನ್ನೇ ತಂದುಕೊಡುತ್ತಾರೆ ಸಿಹಿ ಕಹಿ ಚಂದ್ರು.ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋಗಳಲ್ಲಿ ವಿಶೇಷ ದಿನಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಇರುತ್ತಾರೆ. ಅದರಲ್ಲೂ ಮಹಿಳಾ ದಿನಾಚರಣೆ ಬೇರೆ ಬರ್ತಾ ಇದೆ. ಈ ಮಹಿಳಾ ದಿನಾಚರಣೆಗೆ ಗೆಸ್ಟ್ ಯಾರು..? ಪ್ರೋಗ್ರಾಂ ಹೇಗಿರುತ್ತೆ ಎಂಬೆಲ್ಲಾ ಕುತೂಹಲ ನೋಡುಗರಿಗೂ ಇರುತ್ತೆ. ಅದಕ್ಕೆ ತಕ್ಕಂತೆ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯನ್ನೇ ಅತಿಥಿಯಾಗಿ ಕರೆದಿದ್ದಾರೆ ಸಿಹಿ ಕಹಿ ಚಂದ್ರು. ಮಹಿಳಾ ದಿನಾಚರಣೆಯ ಅಂಗವಾಗಿ ಇನ್ಫೋಸಿಸ್ ಮಾಲಕಿ ಸುಧಾಮೂರ್ತಿ ಅವರನ್ನು ಕರೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಗ್‌ ಅಪ್‌ಡೇಟ್ ಕೊಟ್ಟ ಬಿಜೆಪಿ ನಾಯಕ!.

Mon Mar 6 , 2023
  ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವು ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸಹ ಈ ಪಟ್ಟಿಯಲ್ಲಿ ಇದ್ದಾರೆ ಎಂಬುದು ಕೆಲವರ ಅಚ್ಚರಿಗೆ ಕಾರಣವಾಗಿದೆ. ಮುಖ್ಯಮಂತ್ರಿಸಂಪುಟದ ಸಚಿವರೊಬ್ಬರುಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಸೇರಲಿದ್ದಾರೆಎಂಬ ಸುದ್ದಿ ಹಬ್ಬಿದೆ.ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಚಾಮರಾಜನಗರ ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬುದು ಸುದ್ದಿ. ಮುಂದಿನ ವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಸೋಮಣ್ಣ ಮಾತುಕತೆ […]

Advertisement

Wordpress Social Share Plugin powered by Ultimatelysocial