ನೊಯ್ಡಾ: ಬ್ರಾಹ್ಮಣ ಎಂಬುದು ಒಂದು ಜಾತಿಯಲ್ಲ. ಜೀವನ ನಡೆಸುವ ಒಂದು ಶ್ರೇಷ್ಠ ವಿಧಾನ ಎಂದು ಬಿಜೆಪಿ ಹಿರಿಯ ನಾಯಕ

ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್​ ಶರ್ಮಾ ಹೇಳಿದ್ದಾರೆ.

ಗೌತಮ ಬುದ್ಧನಗರದ ಜೇವರ್​​ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್​ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ದಿನೇಶ್​ ಶರ್ಮಾ, ಅಷ್ಟೇ ಅಲ್ಲ, ನಮ್ಮ ಬಿಜೆಪಿ ಪಕ್ಷ ಯಾವುದೇ ತಾರತಮ್ಯವಿಲ್ಲದೆಎಲ್ಲರಿಗಾಗಿ ಕೆಲಸ ಮಾಡುತ್ತಿದೆ ಎಂದೂ ತಿಳಿಸಿದ್ದಾರೆ.

 

ಪ್ರತಿಪಕ್ಷಗಳು ಜಾತಿವಾದಿಗಳಂತೆ ವರ್ತಿಸುತ್ತಿವೆ ಎಂದು ಆರೋಪಿಸಿದರು. ನಾನು ವಿಧಾನಸಭೆ ಚುನಾವಣೆ ಪೂರ್ವ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಆದರೆ ನಾನು ಹೋದ ಬಹುತೇಕ ಕಡೆ, ಬ್ರಾಹ್ಮಣವಾದ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವು ಏನೆಂದು ಪ್ರಶ್ನೆ ಕೇಳಲಾಗುತ್ತಿದೆ .

“ಯಾರೋ ಬ್ರಾಹ್ಮಣರ ಬಗ್ಗೆ ನನ್ನ ಆಲೋಚನೆಗಳು ಏನು ಎಂದು ಕೇಳಿದರು, ಬಿಜೆಪಿಗೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ’ ಬೇಕು ಎಂದು ನಾನು ಹೇಳಿದೆ. ಬ್ರಾಹ್ಮಣ, ಗುಜ್ಜರ್ ಅಥವಾ ಜಾಟ್‌ ಮಾತ್ರವಲ್ಲ ಪ್ರತಿಯೊಂದು ಜಾತಿಗೂ ಅದರ ಮಹತ್ವವಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಜಾತಿಗಳನ್ನು ಬೆಂಬಲಿಸುತ್ತೇವೆ ಶರ್ಮಾ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯೂಜಿಲೆಂಡ್‌ಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟರು.

Mon Feb 7 , 2022
ಬೀಜಿಂಗ್‌: ಅಮೋಘ ಸಾಮರ್ಥ್ಯ ತೋರಿದ ಸ್ನೋಬೋರ್ಡ್ ಪಟು ಜೊಯಿ ಸ್ಯಾಡೊವ್‌ಸ್ಕಿ ಸೈನಟ್ ಅವರು ನ್ಯೂಜಿಲೆಂಡ್‌ಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟರು. ಕೂಟದ ಎರಡನೇ ದಿನವಾದ ಭಾನುವಾರ ನಡೆದ ಮಹಿಳೆಯರ ಸ್ಲೋಪಿ ಸ್ಟೈಲ್‌ ವಿಭಾಗದಲ್ಲಿ 20 ವರ್ಷದ ಸ್ಯಾಡೊವ್‌ಸ್ಕಿ ಅಮೆರಿಕದ ಜೂಲಿಯಾ ಮರಿನೊ ಮತ್ತು ಆಸ್ಟ್ರೇಲಿಯಾದ ಟೆಸ್ ಕಾಡಿ ಅವರನ್ನು ಹಿಂದಿಕ್ಕಿ 92.88 ಸ್ಕೋರು ಗಳಿಸಿದರು. ಇದು, ಕೂಟದಲ್ಲಿ ನ್ಯೂಜಿಲೆಂಡ್ ಗೆದ್ದ ಮೊತ್ತಮೊದಲ ಚಿನ್ನದ ಪದಕವಾಗಿದೆ.   2018ರ […]

Advertisement

Wordpress Social Share Plugin powered by Ultimatelysocial