ಜನಾರ್ಧನ್ ರೆಡ್ಡಿಯವರನ್ನ ಬಿಜೆಪಿಯಲ್ಲಿಯೇ ಉಳಿಸಿಕೊಳ್ತೀವಿ. ಎಲ್ಲ ಕೇಸ್ ಇತ್ಯರ್ಥ ಮಾಡಿಕೊಂಡು ಅವರು ಬಿಜೆಪಿಗೇ ಬರ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯೆಡಿಯೂರಪ್ಪ ಹೇಳಿದ್ದಾರೆ. ರೆಡ್ಡಿ ಮೊಮ್ಮಗಳ ನಾಮಕರಣದ ವೇಳೆ ಎಲ್ಲ ಬಿಜೆಪಿ ಮುಖಂಡರೂ ರೆಡ್ಡಿ ಜೊತೆ ಮಾತನಾಡಿದ್ದೇವೆ. ಅವರನ್ನ ನಾವುಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ. ಮಾಡೋದೂ ಇಲ್ಲ. ಪಕ್ಷ ಕಟ್ಟೋಕೆ ಅವರೂ ನಮಗೆ ಸಹಕಾರ ಕೊಡ್ತಾರೆ ಎಂದು ಕೊಪ್ಪಳದಲ್ಲಿ ಬಿಎಸ್ವೈ ಹೇಳಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ರೆಡ್ಡಿ ಹೊಸ ಮನೆಯ ಪ್ರವೇಶ ಕಾರ್ಯಕ್ರಮ ಕೂಡ ನಿನ್ನೆ ನಡೆದಿದೆ. ಅಲ್ಲಿಯೇ ರೆಡ್ಡಿ ಇನ್ಮೇಲೆ ಇದ್ದು ಜನರ ಸಮಸ್ಯೆಗಳನ್ನ ಕೇಳ್ತಾಋಎ ಎನ್ನುವ ಮಾತು ಕೇಳಿ ಬಂದಿತ್ತು. ಕಾರಣ ಬಿಜೆಪಿ ನಿರ್ಲಕ್ಷ್ಯದಿಂದ ರೆಡ್ಡಿ “ಕಲ್ಯಾಣ ರಾಜ್ಯ ಪ್ರಗತಿ” ಎನ್ನುವ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಆ ಪಕ್ಷದಿಂದ ಕೊಪ್ಪಳದ ಗಂಗಾವತಿಯಿಂದ ರೆಡ್ಡಿ ಸ್ಪರ್ದೇ ಮಾಡ್ತಾರೆ ಎಂದು ಹೇಳಿದ್ರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಈಗ ಬಿಎಸ್ ವೈ ರೆಡ್ಡಿ ಮನವೋಲಿಸಿ ಪಕ್ಷದಲ್ಲಿಯೇ ಉಳಿಸಿಕೊಳುವ ಪ್ರಯತ್ನ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: