ರಾಜಕೀಯವಾಗಿ ಯಾರೂ ಯಾರನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿಎಸ್ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ್ ಬೊಮ್ಮಾಯಿಯವರನ್ನ ಸಿಎಂ ಮಾಡ್ತಾ ಇದ್ದಂತೆ, ಬಿಜೆಪಿಯಲ್ಲಿ ಬಿಎಸ್ಸವೈಗೆ ಬೆಲೆ ಇಲ್ಲ. ಇನ್ನು ಅವರಿಗೆ ಸ್ಥಾನಮಾನ ಸಿಗಲ್ಲ ಎಂಧು ಮಾತನಾಡಿಕೊಳುತ್ತಿದ್ದರು. ಈ ಮಾತು ಪದೇ ಪದೇ ಕೇಳಿ ಬರ್ತಾನೇ ಇರುತ್ತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಸ್ವೈ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ನನಗೆ ನನ್ನದೇ ಆದ ಶಕ್ತಿ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕಕ್ಕೆ ತರೋಕೆ ಶ್ರಮ ವಹಿಸಿದ್ದೇನೆ. ಇದು ಇಡೀ ರಾಜ್ಯದ ಜನರಿಗೆ ಗೊತ್ತಿದೆ . ಅದನ್ನೇ ಮುಂದುವರೆಸುತ್ತೇನೆ. ಬಿಜೆಪಿ ಪಕ್ಷ ಅದಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: