ಬೆಂಗಳೂರು: ಜೆಡಿಎಸ್ ಪಾರ್ಟಿಯಲ್ಲಿರುವ ಕೆಲವು ಮಂದಿ ನೀಡುತ್ತಿರುವ ಹೇಳಿಕೆಗಳು ಡ್ಯಾಮೇಜ್ ಮಾಡಿರುವುದು ಮುಂದುವರೆಯುತ್ತಿದೆ. ಈ ನಡುವೆ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಸದ್ಯ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಹೊರೆ ಹೊತ್ತಿರುವ ಸಿಎಂ ಇಬ್ರಾಹಿಂ ಹೇಳಿಕೆ ಮತ್ತೆ ಪಾರ್ಟಿಗೆ ಮುಜುಗರವನ್ನು ತಂದಿದೆ.
ಹೌದು, ವಿಧಾನಸೌಧದಲ್ಲಿ ಸಿ.ಎಂ ಇಬ್ರಾಹಿಂ ಮಾತನಾಡುತ್ತ, ರಾಜ್ಯದಲ್ಲಿ ಇರುವುದು ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ ಇದಾಗಿದ್ದು, ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರವನ್ನು ಕಿತ್ತು ಹಾಕಬೇಕು ಅಂತ ಹೇಳುತ್ತ ಮಂಗಳಮುಖಿಯರ ರೀತಿಯಲ್ಲಿ ಚಪ್ಪಾಳೆಯನ್ನು ತಟ್ಟಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ಸಿಎಂ ಇಬ್ರಾಹಿಂ ಅವರ ಈ ಹೇಳಿಕೆ ಸಹಜವಾಗಿ ಪಾರ್ಟಿಗೆ ಡ್ಯಾಮೇಜ್ ಆಗಲಿದ್ದು, ಹಿರಿಯ ಮುಖಂಡರು ಯಾವ ರೀತಿಯಲ್ಲಿ ಇನ್ಮುಂದೆ ತಮ್ಮ ಮಾತಿನ ಮೇಲೆ ಹಿಡಿತವನ್ನು ಸಿಎಂ ಇಬ್ರಾಹಿಂ ಅವರು ಇಟ್ಟುಕೊಳ್ಳುತ್ತಾರೆ ಎನ್ನುವುದುನ್ನು ಕಾದು ನೋಡಬೇಕಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada