ಚಾಮರಾಜನಗರ ತಾಲ್ಲೂಕಿನ ಕರಿಕಲ್ಲು ಗಣಿಗಾರಿಕೆಗೆ ತಮಿಳುನಾಡಿನಿಂದ ಕಲಬೆರೆಕ ಡೀಸೆಲ್ ಹಾಗೂ ಪೆಟ್ರೋಲ್ ಸರಬರಾಜು ಮಾಡುತ್ತಿದ್ದನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಪಡಿಸಿಕೊಂಡಿರುವ ಘಟನೆ ನಡೆದಿದೆ.ತಮಿಳುನಾಡಿನ ನಾಮಕಲ್ ನ ಕಲಬೆರಕೆ ಡೀಸೆಲ್ ತುಂಬಿದ ಟ್ಯಾಂಕರ್ ನ್ನು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಇರುವ ಶ್ರೀ ಕೃಷ್ಣ ಗ್ರಾನೈಟ್ ನಲ್ಲಿ ಕಲಬೆರಕೆ ಡೀಸೆಲ್ ಇಳಿಸುವಾಗ ಆಹಾರ ಇಲಾಖೆಯ ಉಪ ನಿರ್ಧೇಶಕ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಪಡಿಸಿಕೊಳ್ಳಲಾಯಿತು.ಬಲ್ಲ […]

ಬದಲಾವಣೆ ಜಗತ್ತಿನ ನಿಯಮ ಬದಲಾವಣೆಗೆ ಹೊಂದಕೊಂಡು ಮುಂದೆ ಹೋದವರು ಯಶಸ್ಸು ಕಾಣುತ್ತಾರೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ….ಬೆಳಗಾವಿಯ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು,ಅರ್ಥ ಮತ್ತು ಪುರುಷಾರ್ಥ ಮೊದಲಿತ್ತು. ಪುರುಷಾರ್ಥ ಬದಲಾಗಿ ಸ್ತ್ರೀ ಆರ್ಥ ಕೂಡ ಆಗಿದೆ.ಸಮಾಜವನ್ನ ಸಿದ್ಧ ಮಾಡುವ ಕೆಲಸ ಎಲ್ಲರೂ ಮಾಡಬೇಕು.ಉದ್ಯೋಗ ಮೇಳದಲ್ಲಿ ಬಂದ 78 ಕಂಪನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸ್ವಾಭಿಮಾನದ ವ್ಯಕ್ತಿತ್ವ ನಿರ್ಮಿಸುವ ಕಾರ್ಯವನ್ನ ಕಂಪನಿಗಳು ಮಾಡುತ್ತಿವೆ..ಕಂಪನಿಗಳ ಮುಖ್ಯಸ್ಥರಲ್ಲಿ ಮನವಿ ಯುವಕರನ್ನ ಬೆಳಿಸಬೇಕು.ವೈಜ್ಞಾನಿಕ […]

ಹೆಸ್ಕಾಂ ಯಡವಟ್ಟಿನಿಂದ 4 ಏಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ..ಶಾರ್ಟ್ ಸರ್ಕ್ಯೂಟ್ ರಾಮಣ್ಣ ಗುರಿಕಾರ ಎಂಬುವರಿಗೆ ಸೇರಿದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ…ಘಟನೆಗೆ ಸಂಭಂದಿಸಿ ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು ಅಧಿಕಾರಿಗಳು ಸಾರಿಯಾಗಿ ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಇನ್ನು ಘಟನಾಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದೆ.. ಹೆಸ್ಕಾಂ ನಿರ್ಲಕ್ಷ್ಯದಿಂದಲೇ ಕಬ್ಬಿಗೆ ಬೆಂಕಿ  […]

ಗುಬ್ಬಿ ತಾಲ್ಲೂಕಿನ ಕಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರವಿಕುಮಾರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ಥಳೀಯರು  ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಆರೋಪ ಬಗ್ಗೆ ಸ್ಪಷ್ಟಿಕರಣ ನೀಡಿದರು.ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿ ಮಾತನಾಡಿದ ಅವರು ಕಲ್ಲೂರು ಗ್ರಾಮ ಪಂಚಾಯಿತಿ ಯಲ್ಲಿ ಅಧ್ಯಕ್ಷ ರಾಗಿರುವ ದಲಿತ ಸಮುದಾಯದ ಕೆ.ಎಲ್.ರವಿಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ […]

ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಚಿನ್ನದ ರಾಡ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ…ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್  ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ,ಮಂಗಳವಾರ  ಶಾರ್ಜಾದಿಂದ ದೇವನಹಳ್ಳಿ ಏರ್ಪೊಟ್ ಗೆ ಬಂದಿದ್ದ ವಿದೇಶಿ ವಿಮಾನದಲ್ಲಿ ಏರ್ ಅರೇಬಿಯಾ  ಜಿ9 496  ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ ಕಸ್ಟಮ್ಸ್  ವಿಭಾಗದ  ಏರ್  ಇಂಟೆಲಿಜೆನ್ಸ್ ಯೂನಿಟ್  ವಿಭಾಗದ ಅಧಿಕಾರಿಗಳು  ವಿಚಾರಣೆ ನಡೆಸಿದಾಗ ಮ್ಯಾನುಯಲ್ ಜ್ಯೂಸರ್ ಯಂತ್ರದಲ್ಲಿ ಚಿನ್ನದ ರಾಡ್ ಕಳ್ಳಸಾಗಾಣಿಕೆ  […]

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸಲು ಕೇಂದ್ರ ಸರ್ಕಾರದ ಮೇಲೆ ಎಲ್ಲಾ ರೀತಿಯ ಒತ್ತಡ ತರಲಾಗಿದೆ. ನ್ಯಾಯಾಲಯದ ವಾಜ್ಯ ಇತ್ಯರ್ಥವಾದ ಬಳಿಕವೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.ವಿಧಾನ ಪರಿಷತ್‍ನಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣಾ ನ್ಯಾಯಾೀಕರಣದ ತೀರ್ಪು ಅಸೂಚನೆ ಪ್ರಕಟವಾದ ಬಳಿಕ ಕೃಷ್ಣಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ […]

ಕಾಮನ್ ವೆಲ್ತ್ ಸಂಸದೀಯ ಸಂಘಟನೆ ಸಂಸದೀಯ ಪ್ರಜಾಪ್ರಭುತ್ವ ಆಳವಾದ ಬೇರು ಬಿಡಲು ಮತ್ತು ವಿಶ್ವಾದ್ಯಂತ ಚೈತನ್ಯಶೀಲ ಶಕ್ತಿಯಾಗಲು ಅನುವು ಮಾಡಿಕೊಟ್ಟಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಸುವರ್ಣ ವಿಧಾನಸೌಧದ ರಾಜ್ಯ ವಿಧಾನಮಂಡಲದ ಕೇಂದ್ರ ಸಭಾಂಗಣದಲ್ಲಿ ನಡೆದ ಸಿಪಿಎ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಪಿಎ ತನ್ನ ಎಲ್ಲಾ ಸಮ್ಮೇಳನಗಳಲ್ಲಿ ಶಾಸಕರ ಸಾಮಥ್ರ್ಯ ವರ್ಧನೆ, ಬಜೆಟ್ ಪ್ರಸ್ತಾವನೆಗಳು ಮತ್ತು ಪರಿಸರ ಸಮಸ್ಯೆಗಳಂತಹ ಮಹತ್ವದ ವಿಷಯಗಳನ್ನು ಕೈಗೆತ್ತಿಕೊಂಡು ವಿಶ್ಲೇಷಿಸುತ್ತಿದೆ. ಪ್ರತಿ […]

ಸಂತ ಅಂತೋಣಿ ವಿಗ್ರಹ ದ್ವಂಸ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯದ ಚರ್ಚ್‌ ನಲ್ಲಿ ನಡೆದಿದೆ…ಸೂಸೆಪಾಳ್ಯದ ಹೊರವಲಯದ ಕೆರೆ ಬಳಿ ಇರುವ ಸಂತ ಅಂತೋಣಿ ದೇವಾಲಯದ ಗಾಜನ್ನು ಮತಾಂದರರು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ…ದುಷ್ಕರ್ಮಿಗಳ ಕೃತ್ಯಕ್ಕೆ  ಕ್ರಿಶ್ಚಿಯನ್ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಮತಾಂತರ ನಿಷೇಧ ಕಾಯ್ದೆಯಿಂದ ಪ್ರೇರಣೆ ಪಡೆದು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬೆಳಗಾವಿ ಘಟನೆಗೆ ಸಂಭಂದಿಸಿದಂತೆ ಹಲವು ಕನ್ನಡ ಸಂಘಟನೆಗಳು 31ರಂದು ಕರ್ನಾಟಕ ಬಂದ್‌ ಗೆ ಕರೆನೀಡಿದ್ದಾರೆ. ಬಂದ್‌ ಕುರಿತಂತೆ ಹಲವಾರು ಕನ್ನಡ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲ .ಆದರೂ ಕೆಲ ಸಂಘಟನೆಗಳು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು 30ರ ಒಳಗಾಗಿ ರಾಜ್ಯದಲ್ಲಿ ನೀಷೇಧ ಮಾಡದಿದ್ದಲ್ಲಿ ಬಂದ್‌ ಮಾಡಲು ಸಿದ್ದತೆ ಮಾಡಿಕೋಂಡಿವೆ. ಲವ್‌ ಯೂ ರಚ್ಚು ಸಿನಿಮಾದ ನಿರ್ಮಾಪಕರ ತಲೆ ನೊವಿಗೆ ಕಾರಣವಾದ ಬಂದ್: ಹೌದು,ಈಗಾಗಲೆ ಹಲವಾರು ಅಡೆತಡೆಗಳನ್ನು ಎದುರಿಸಿದ ಸಿನಿಮಾ ತಂಡ ಇದೆ […]

ಬೆಳೆ ಹಾನಿ ಕುರಿತು ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತ ಪರವೆಂದು ಮತ್ತೊಮ್ಮೆ ಸಾಬೀತಾಗಿದೆ.ಈ ಮೂಲಕ ದೇಶದ ರೈತರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ ಎಂದು ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಹುಲಿನಾಯ್ಕರ್ ತಿಳಿಸಿದರು.ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳನ್ನು ಪ್ರಕಟಿಸಿದೆ ಇದು ಕರ್ನಾಟಕದಲ್ಲಿ ಈ ವರೆಗೆ ಕಂಡಿರುವ […]

Advertisement

Wordpress Social Share Plugin powered by Ultimatelysocial