‘ಕಸ್ತೂರಿ ಮಹಲ್’ ಅನೌನ್ಸ್ ಮಾಡಿದ್ದಲ್ಲಿಂದ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇತ್ತು. ಕೆಲವೊಮ್ಮೆ ನೆಗೆಟಿವ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದರೆ, ಮತ್ತೆ ಕೆಲವು ಒಳ್ಳೆ ಕಾರಣಕ್ಕೆ ಸುದ್ದಿಯಾಗಿತ್ತು. ಸದ್ಯ ಎದುರಾದ ಎಲ್ಲಾ ಸಂಕಷ್ಟಗಳನ್ನು ಎದುರಿಸಿ, ಸಿನಿಮಾ ತಂಡ ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿರುವ ಸಿನಿಮಾ ಬಿಡುಗಡೆಗೂ ಸಜ್ಜಾಗಿ ನಿಂತಿದೆ. ಕೆಲವು ತಿಂಗಳ ಹಿಂದೆ ‘ಕಸ್ತೂರಿ ಮಹಲ್’ ಸಿನಿಮಾ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಶಾನ್ವಿ ಶ್ರೀವತ್ಸವ್ ಲುಕ್, […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಭಿಮಾನ, ಪ್ರೀತಿ. ಅದಕ್ಕೆ ಅಪ್ಪು ಅಗಲಿದ ಸುದ್ದಿ ತಿಳಿದ ಕೂಡಲೇ ದರ್ಶನ್ ಕ್ರಾಂತಿ ಚಿತ್ರದ ಚಿತ್ರೀಕರಣ ತಕ್ಷಣ ನಿಲ್ಲಿಸಿ, ಆಸ್ಪತ್ರೆಗೆ ತೆರೆಳಿದ್ದರು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಆ ಮಟ್ಟಿಗೆ ಇಬ್ಬರಲ್ಲೂ ಸ್ನೇಹ ಪ್ರೀತಿ ಇತ್ತು. ಪುನೀತ್ ರಾಜ್‌ಕುಮಾರ್ ಅವರನ್ನುಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಎನ್ನುವುದು […]

ಮುಂಬೈ: ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಮತ್ತು ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದಾರೆ. ಎರಡು ವರ್ಷ ಕೋವಿಡ್ ನಿಂದ ತಪ್ಪಿಸಿಕೊಂಡ ನಂತರ ಇದೀಗ ಮೂರನೇ ವರ್ಷ 2022ರಲ್ಲಿ ಒಮಿಕ್ರಾನ್ ನನ್ನ ಇಮ್ಯೂನಿ ವ್ಯವಸ್ಥೆಯಲ್ಲಿ ನುಸುಳಿದೆ. ಕಳೆದ ರಾತ್ರಿ ಪಾಸಿಟಿವ್ ದೃಢಪಟ್ಟಿದೆ. ದಯವಿಟ್ಟು ಎಲ್ಲರೂ ಸುರಕ್ಷಿತರಾಗಿರಿ ಮತ್ತು ಕಾಳಜಿ ವಹಿಸಿ ಎಂದು ಅವರು ಬರೆದುಕೊಂಡಿದ್ದಾರೆ. […]

ಕೊರೊನಾದಿಂದ ಇಡೀ ಭಾರತದ ಚಿತ್ರರಂಗ ನಲುಗಿ ಹೋಗಿದೆ. ಕಳೆದ ಎರಡು ವರ್ಷಗಳಿ ಚಿತ್ರರಂಗ ಎಲ್ಲಿ ನಶಿಸಿ ಹೋಗುತ್ತದೋ ಎಂಬ ಆತಂಕ ಎದುರಾಗಿದೆ. ಒಂದೊಂದಾಗೇ ಚಿತ್ರಮಂದಿರಗಳು ಮುಚ್ಚುತ್ತಿವೆ. ಚಿತ್ರರಂಗದ ಕಾರ್ಮಿಕರ ಬದುಕು ಮತ್ತೆ ಅತಂತ್ರಕ್ಕೆ ಸಿಲುಕುವ ಭಯ ಎದುರಾಗಿದೆ. ಕನ್ನಡ ಚಿತ್ರರಂಗ ಮತ್ತೆ ನಷ್ಟ ಅನುಭವಿಸುವ ಭೀತಿಯಲ್ಲಿದೆ. ಇವೆಲ್ಲದರಿಂದ ಪಾರಾಗಲು ಇಡೀ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಲು ದೊಡ್ಡ ಸಿನಿಮಾ ಬಿಡುಗಡೆಯಾಗಲೇ ಬೇಕು. ಇಂತಹ ಸಿನಿಮಾಗಳಲ್ಲಿ ‘ಕೆಜಿಎಫ್ 2’ ಪ್ರಮುಖ ಸ್ಥಾನದಲ್ಲಿದೆ. ‘ಕೆಜಿಎಫ್ […]

ಕನ್ನಡ ಚಿತ್ರ ರಂಗದಲ್ಲಿ ಸ್ಟಾರ್‌ ನಟರು ಅಂತ ಬಂದಾಗ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರೆ. ಹೀಗಿರೋವಾಗ ನಮ್ಮ ಹೀರೋಗಳ ನಡುವೆ ಸಾಕಷ್ಟು ಹೊಂದಾಣಿಕೆ ಇರುವುದು ಅನುಮಾನವೇನಲ್ಲ. ಆದರೆ ಹೊಂದಾಣಿಕೆ ಅಥವಾ ಎಲ್ಲರೂ ಒಂದೇ ಎನ್ನುದಕ್ಕಿಂದ ಹೆಚ್ಚಾಗಿ ಸ್ಟಾರ್‌ ವಾರ್ ಸದಾ ಸದ್ದು ಮಾಡುತ್ತದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ವಾರ್ ಕಣ್ಣಿಗೆ ಕಂಡರು, ಕಾಣದಂತೆ ಇದೆಯಾ ಎನ್ನುವ ಅನುಮಾನ ಮೂಡಿದೆ. ಸ್ಟಾರ್‌ವಾರ್‌ ಬಗ್ಗೆ ಈಗ ಮಾತನಾಡಲು ಕಾರಣ ನಟ ರಾಕಿಂಗ್ ಸ್ಟಾರ್‌ ಯಶ್. […]

ನಟ ದುನಿಯಾ ವಿಜಯ್, ಸಾಧು ಕೋಕಿಲ, ನಟಿ, ರಾಜಕಾರಣಿ ಉಮಾಶ್ರೀ ಹಾಗೂ ಜಯಮಾಲಾ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ಕಂಡ ಈ ಮೂವರು ನಟರು ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ದುನಿಯಾ ವಿಜಯ್, ಸಾಧು ಕೋಕಿಲ, ಉಮಾಶ್ರೀ ಹಾಗೂ ನಟಿ ಜಯಮಾಲಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮದಲ್ಲಿ […]

ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ಗಳಿಗಾಗಿ ಪ್ರಾಣವನ್ನ ಬೇಕಾದರೂ ನೀಡುವ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾ, ನಟನೆಯಿಂದ ಹಿಡಿದು ಪ್ರತಿಯೊಂದು ಹೆಜ್ಜೆಯನ್ನೂ ಅನುಕರಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಅಷ್ಟೇ. ಅಪ್ಪು ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್ ಮುಂದೆ ಹಬ್ಬ ಮಾಡುತ್ತಿದ್ದರು. ಅಭಿಮಾನಿಗಳ ಜೊತೆ ಸೇರಿಕೊಂಡು ಪುನೀತ್ ಕೂಡ ಸಂಭ್ರಮಿಸುತ್ತಿದ್ದರು. ಈ ನೆನೆಪು ಅಭಿಮಾನಿಗಳ ಮಾನಸ್ಸಿನಿಂದ ಇನ್ನು ಮೆರೆಯಾಗಿಲ್ಲ. ಪುನೀತ್ ರಾಜ್‌ಕುಮಾರ್ ಅಗಲಿಕೆ ಅದೆಷ್ಟೋ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು […]

ಬೆಂಗಳೂರು, ಜ.11- ನನ್ನ ಜೀವನದಲ್ಲಿ ಸುಮಾರು ಏಳು ಬೀಳುಗಳನ್ನು ಕಂಡಿದ್ದೇನೆ. ಹಿಂದೆ ಆದ ಕೆಲವು ಲೋಪಗಳನ್ನು ಸರಿಪಡಿಸಿ ಮುಂಬರುವ ದಿನಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದು ನಟ, ನಿರ್ದೇಶಕ, ನಿರ್ಮಾಪಕ ಹುಚ್ಚ ವೆಂಕಟ್ ಹೇಳಿದರು.ಪ್ರೆಸ್‍ಕ್ಲಬ್ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗೆದ್ದಾಗ ಸಂತೋಷಪಟ್ಟು, ಬಿದ್ದಾಗ ಕೈಯೆತ್ತಿ ನಿಲ್ಲಿಸಿದ ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಇಂದು ಮಾಧ್ಯಮದ ಮುಂದೆ ಬಂದಿದ್ದೇನೆ ಎಂದರು. ನನ್ನಲ್ಲಿರುವ ಕೋಪವನ್ನು ಬಿಟ್ಟು […]

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ನಟಿ ತನ್ನ ನಿಷ್ಪಾಪ ಶೈಲಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾಳೆ. ಆಕೆಯ ಫ್ಯಾಶನ್ ಸೆನ್ಸ್ ಯಾವಾಗಲೂ ಉನ್ನತ ದರ್ಜೆಯಲ್ಲಿಯೇ ಉಳಿದಿದೆ ಮತ್ತು ತನ್ನ ನಿರರ್ಗಳ ಶೈಲಿ ಮತ್ತು ಸೌಂದರ್ಯದಿಂದ ಜನರನ್ನು ಮಂತ್ರಮುಗ್ಧರನ್ನಾಗಿಸಲು ಅವಳು ಎಂದಿಗೂ ವಿಫಲವಾಗುವುದಿಲ್ಲ. ಬಿಳಿ ಮೇಳಗಳನ್ನು ಧರಿಸಿರುವ ಆಕೆಯ ಚಿತ್ರಗಳನ್ನು ಪರಿಶೀಲಿಸಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

Advertisement

Wordpress Social Share Plugin powered by Ultimatelysocial