ನವದೆಹಲಿ,ಜ.೧೩- ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಫೆ. ೧ ರಂದು ಮಂಡನೆಯಾಗಲಿದೆ.
ಕರ್ನಾಟಕ ಸೇರಿದಂತೆ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯುವ ರಾಜ್ಯಗಳಿಗೆ ಭರಪೂರ ಕೊಡುಗೆಗಳು ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ಜನಪ್ರಿಯ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧತೆ ನಡೆಸಿದ್ದಾರೆ.ಕೇಂದ್ರ ಮುಂಗಡ ಪತ್ರದ ಬಜೆಟ್ ಅಧಿವೇಶನ ಈ ತಿಂಗಳ ೩೧ ರಿಂದ ಏಪ್ರಿಲ್ ೬ರ ವರೆಗೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.೨೦೨೩ -೨೪ ನೇ ಸಾಲಿನ ಮುಂಗಡ ಪತ್ರವನ್ನು ಫೆ.೧ ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ,ಜನವರಿ ೩೧ ರಿಂದ ಏಪ್ರಿಲ್ ೬ ರವರೆಗೆ ಎರಡು ಹಂತದಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ಸಂಸತ್ತಿನ ಉಭಯ ಸದನದ ಸದಸ್ಯರನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಒಟ್ಟು ೨೭ ಸಭೆಗಳು ೬೬ ದಿನಗಳಲ್ಲಿ ಸಾಮಾನ್ಯ ವಿರಾಮದೊಂದಿಗೆ ಕಲಾಪ ನಡೆಯಲಿದೆ ಎಂದು ಅವರು ಹೇಳಿದರು.ಕಳೆದ ವರ್ಷ ಆಗಸ್ಟ್ನಲ್ಲಿ ದ್ರೌಪದಿ ಮುರ್ಮು ಅವರು ರಾಷ್ಡ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಲಿದ್ದಾರೆ ಎಂದರು ತಿಳಿಸಿದ್ದಾರೆ.ಹಲವು ಗೊಂದಲಗಳ ನಡುವೆ ಕಳೆದ ತಿಂಗಳು ಚಳಿಗಾಲದ ಅಧಿವೇಶನವನ್ನು ಅರ್ದಕ್ಕೆ ಮೊಟಕು ಮಾಡಲಾಗಿತ್ತು. ಹೀಗಾಗಿ ಬಜೆಟ್ ಅಧಿವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸಲಾಗುತ್ತಿದೆ.ಅಮೃತ್ ಕಾಲ ನಡುವೆ, ರಾಷ್ಟ್ರಪತಿಗಳ ಭಾಷಣ, ಕೇಂದ್ರ ಬಜೆಟ್ ಮತ್ತು ಇತರ ವಿಷಯಗಳ ಮೇಲಿನ ಧನ್ಯವಾದಗಳ ಬಗ್ಗೆ ಚರ್ಚೆಗಳನ್ನು ಎದುರು ನೋಡಲಾಗುತ್ತಿದೆ ಎಂದರು.
https://play.google.com/store/apps/details?id=com.speed.newskannada