ಪಿರಮಿಡ್ ರೀತಿಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚನೆ ಮಾಡ್ತಿದ್ದವರ ಬಂಧನ.
ಹೈಗ್ರೌಂಡ್ಸ್ ಪೊಲೀಸರಿಂದ ಆರೋಪಿಗಳ ಬಂಧನ.
ಶೇಕ್ ಸಾಧಿಕ್ ,ಯೋಗೇಶ್ , ಪ್ರಮೋದ್ , ಸುನೀಲ್ ಜೋಷಿ ಬಂಧಿತರು.
ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿಗಳು.
ಇ ಬಯೋಮೆಟ್ರಿಕ್ ಎವಾಲ್ಯೂಷನ್ ಎಂಬ ಕಂಪನಿಯ ಕಾರ್ಯಕ್ರಮ ಆಯೋಜನೆ.
ಗ್ರಾಹರಿಂದ ಹಣ ಡೆಪಾಸಿಟ್ ಮಾಡಿಕೊಂಡು ಹೆಚ್ಚಿನ ಹಣದ ಆಮೀಷ ಒಡ್ಡುತ್ತಿದ್ದ ಆರೋಪಿಗಳು..
ಮಲ್ಟಿ ಲೆವೆಲ್ ಮನಿ ಮಾರ್ಕೆಟಿಂಗ್ ಸ್ಕೀಮ್ ನಡೆಸಲು ಜಾಹಿರಾತು ನೀಡಿ ಆಮೀಷ ಒಡ್ಡುತ್ತಿದ್ದ ಆರೋಪಿಗಳು.
ಮ್ಯಾಗ್ನೇಟಿಕ್ ಉತ್ಪನ್ನಗಳ ಮಾರಾಟದ ಬಗ್ಗೆ ಮಾತುಕತೆ.
ಈಗಾಗಲೆ 10 ಲಕ್ಷದವರೆಗೂ ಸಂಪಾದನೆ ಮಾಡಿದ್ದಾರೆಂದು ಸನ್ಮಾನ ಕೂಡ ಮಾಡಿ ಹಣ ಹೂಡಲು ಪ್ರಚೋದನೆ ಮಾಡ್ತಿದ್ದರು.
ಇದು ಮತ್ತೊಂದು ರೀತಿಯ ವಂಚನೆ ಪ್ರಕರಣ ಎಂದು ತಿಳಿದು ದೂರು ನೀಡಿದ್ದ ಗುಪ್ತ ವಾರ್ತೆ ಸಿಬ್ಬಂದಿ.
ಸದ್ಯ ಆರೋಪಿಗಳನ್ನ ಬಂಧಿಸಿರೋ ಪೊಲೀಸರು.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಜಿಎಸ್ ಟಿ ಹೆಸರಲ್ಲಿ ಖಾಸಗಿ ಕಂಪನಿಗೆ 9 ಕೋಟಿ 60 ಲಕ್ಷ ವಂಚನೆ..!
ಅಸೋಸಿಯೇಟ್ ಚಾಟೆಡ್ ಅಕೌಂಟೆಂಟ್ ಆಗಿ ಬಂದವನು ಜಿಎಸ್ ಟಿ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ.
ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಆಟೋ ಮೋಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಚೀಟಿಂಗ್.
ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಿದ ಸಂಜಯನಗರ ಪೊಲೀಸರು.
ನಿಖಿಲ್ ಎಂಬವವನು ಸೇರಿ ನಾಲ್ವರ ಬಂಧನ.
ಕಂಪನಿಯ ಇಂಟರ್ನಲ್ ಅಡಿಟ್ ರಿಪೋರ್ಟ್ ನೀಡಿದ್ದ ಆರೋಪಿ ನಿಖಿಲ್.
ಈ ವೇಳೆ ಜಿಎಸ್ ಟಿ ಕಟ್ಬೇಕು ಅಂತಾ ಹೇಳಿ ರಿಪೋರ್ಟ್.
ಸುಮಾರು 9ಕೋಟಿಗೂ ಅಧಿಕ ಹಣ ಜಿಎಸ್ ಟಿ ಕಟ್ಟೋಕೆ ರಿಪೋರ್ಟ್.
ಅಂತೆಯೇ ಹಂತ ಹಂತವಾಗಿ ಜಿಎಸ್ಟಿ ಬಿಲ್ ಕೊಟ್ಟಿದ್ದ ಕಂಪನಿ ಮಾಲೀಕ.
ಆದ್ರೆ ಜಿಎಸ್ ಟಿ ಕಟ್ಟಿದ್ರೂ ಕಟ್ಟಬೇಕೆಂದು ಹಣ ಹಾಕಿಸಿಕೊಂಡು ವಂಚನೆ.
ನಂತರ ವಂಚನೆ ಎಸೆಗಿರೋದು ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ದೂರು ನೀಡಿದ್ದ ಮಾಲೀಕ.
ನಂತರ ಪ್ರಕರಣ ಸಂಜಯನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಸದ್ಯ ನಾಲ್ವರನ್ನೂ ಬಂಧಿಸಿ ಜೈಲಿಗಟ್ಟಿರೋ ಸಂಜಯ್ ನಗರ ಪೊಲೀಸರು.
ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ನಿಖಿಲ್ ಮತ್ತು ವಿನಯ್ ಬಾಬು ಬಂಧನ.
ಅರೋಪಿಗಳಿಂದ ಸುಮಾರು ಮೂರು ಕೋಟಿಗು ಅಧಿಕ ಮೌಲ್ಯದ ಆಸ್ತಿ ಪಾಸ್ತಿ ಜಪ್ತಿ..
ಅಪಾರ್ಟ್ಮೆಂಟ್ ಗಳಲ್ಲಿ ಫ್ಲಾಟ್ ಖರೀದಿ ಮಾಡಿದ್ದ ವಿನಯ್..
ಶೋಕಿ ಜೀವನಕ್ಕೆ ಕೋಟ್ಯಾಂತರ ರೂ ಹಣ ಕಳೆದಿದ್ದಾನೆ..
ಸದ್ಯ ಅರೋಪಿಗಳ ಬ್ಯಾಂಕ್ ಅಕೌಂಟ್ ಮನೆ ಎಲ್ಲವನ್ನು ಜಪ್ತಿ ಮಾಡಿರುವ ಪೊಲೀಸರು.
https://play.google.com/store/apps/details?id=com.speed.newskannada