ಚಾಕುವಿನಿಂದ ದಾಳಿ: ಆರೋಪಿಗೆ ಜೈಲು

 

ಕಲಬುರಗಿ: ವ್ಯಕ್ತಿ ಮೇಲೆ ಚಾಕುವಿನಿಂದ ದಾಳಿ ಮಾಡಿ ಕೊಲೆ ಯತ್ನಿಸಿದ್ದ ಆರೋಪಿಗೆ ಇಲ್ಲಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.ಇಲ್ಲಿನ ಪಂಚಶೀಲ ನಗರದ ಪ್ರಿಯದರ್ಶನ ಆಲಿಯಾಸ್‌ ಛೋಟಾ ಗಾಯಕವಾಡ ಎಂಬಾತನೇ ಶಿಕ್ಷೆಗೆ ಗುರಿಯಾದವ.2020ರ ಸೆ.7ರಂದು ಇದೇ ಪಂಚಶೀಲ ನಗರದ ವಿಶಾಲ ಎಂಬಾತನ ಮೇಲೆ ಹಳೆ ವೈಷಮ್ಯದಿಂದ ಚಾಕುವಿನಿಂದ ದಾಳಿ ಮಾಡಿ ಕೊಲೆಜಛಿ ಯತ್ನಿಸಿದ್ದ.ಈ ಬಗ್ಗೆ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ ಗಡೇದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಜಗದೀಶ ವಿ.ಎನ್‌. ಅವರು ಈ ತೀರ್ಪು ನೀಡಿದ್ದಾರೆ. 15 ಸಾವಿರ ದಂಡದ ಹಣದಲ್ಲಿ 10 ಸಾವಿರ ರೂ.ಗಳನ್ನು ಗಾಯಾಳುವಿಗೆ ಪರಿಹಾರ ನೀಡಬೇಕೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಾಮರಾಜೇಂದ್ರ ಒಡೆಯರ್

Tue Feb 22 , 2022
ಆಧುನಿಕ ಮೈಸೂರು ಸಂಸ್ಥಾನದ ಏಳ್ಗೆಗೆ ಭಾಷ್ಯ ಬರೆದುದೇ ಅಲ್ಲದೆ ಅದರ ಮುಂದಿನ ಮಹೋನ್ನತ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಟ್ಟವರು ಚಾಮರಾಜೆಂದ್ರ ಒಡೆಯರ್ ಅವರು. ವಿಶ್ವ ಸರ್ವಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳಲು ಸ್ವಾಮಿ ವಿವೇಕಾನಂದರಿಗೆ ಎಲ್ಲ ರೀತಿಯ ಬೆಂಬಲ ನೀಡಿದ ಕೀರ್ತಿ ಕೂಡ ಈ ಮಹಾಶಯರಿಗೆ ಸಂದಿದೆ.‍ ಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ಬೆಟ್ಟದ ಕೋಟೆ ಶಾಖೆಯ ಸರ್ದಾರ್ ಚಿಕ್ಕ ಕೃಷ್ಣರಾಜ ಅರಸ್‍ ಅವರ ಮೂರನೇ ಮಗನಾಗಿ 1863ರ ಫೆಬ್ರವರಿ 22ರಂದು […]

Advertisement

Wordpress Social Share Plugin powered by Ultimatelysocial