ಬೆಂಗಳೂರು: ಕರ್ನಾಟಕ ಫಿಲ್ಮ್ ಛೇಂಬರ್ ಚುನಾವಣೆ ನಡೆದು ಮೂರು ವರ್ಷಗಳಾಗಿವೆ. ಚುನಾವಣೆ ನಡೆಸುವಂತೆ ಸಂಬಂಧ ಪಟ್ಟಂದ ಇಲಾಖೆಯಿಂದ ಆದೇಶಿಸಲಾಗಿದ್ದರೂ, ಇದುವರೆಗೆ ಚುನಾವಣೆ ನಡೆಸಿಲ್ಲ. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನಿರ್ಮಾಪಕರಿಬ್ಬರು ಕಿತ್ತಾಡಿಕೊಳ್ಳುವ ಮೂಲಕ ರಣರಂಗವಾಗಿತ್ತು.ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನಿರ್ಮಾಪಕರಾದಂತ ಭಾ ಮಾ ಹರೀಶ್, ಎನ್ ಎಂ ಸುರೇಶ್ ಹಾಗೂ ಎ ಗಣೇಶ್ ಅವರು ಚುನಾವಣೆ ಸಂಬಂಧ ಪರಸ್ಪರ ನಿಂದಿಸಿಕೊಂಡು ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಕೈ ಕೈ ಮಿಲಾಯಿಸೋ ಹಂತಕ್ಕೂ ವಾಗ್ವಾದ ನಡೆದಿದೆ ಎನ್ನಲಾಗಿದೆ.ಇದಷ್ಟೇ ಅಲ್ಲದೇ ಮೂರು ವರ್ಷ ಕಳೆದ್ರೂ ಚುನಾವಣೆ ನಡೆಸದಂತ ಎನ್ ಎಂ ಸುರೇಶ್ ಬಗ್ಗೆ ವಾಗ್ದಾಳಿ ನಡೆಸಿದಂತ ನಿರ್ಮಾಪಕ ಭಾ ಮಾ ಹರೀಶ್, ಫಿಲ್ಮ ಛೇಂಬರ್ ಚುನಾವಣೆ ನಡೆಸದೇ ಇದ್ದರೇ ಅಹೋರಾತ್ರಿ ಧರಣಿ, ಪ್ರತಿಭಟನೆ ನಡೆಸುವಂತ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada