ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ;

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಮೊನ್ನೆ ( ಜನವರಿ 26 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಿಂದಲೇ 5.45 ಕೋಟಿ ಗಳಿಕೆ ಮಾಡಿದ್ದ ಕ್ರಾಂತಿ ಬಿಡುಗಡೆ ದಿನ ಬಾಕ್ಸ್ ಆಫೀಸ್‌ನಲ್ಲಿ 12.85 ಕೋಟಿ ಕಲೆಕ್ಷನ್ ಮಾಡಿತು.

ಹೀಗೆ ಕ್ರಾಂತಿ ದೊಡ್ಡ ಮಟ್ಟದ ಓಪನಿಂಗ್ ಅನ್ನೇ ಪಡೆದುಕೊಂಡಿತು.

ಸರ್ಕಾರಿ ಶಾಲೆಯ ಮಹತ್ವವನ್ನು ಚಿತ್ರ ಸಾರಿದ್ದು, ಒಂದೊಳ್ಳೆ ಸಂದೇಶವನ್ನು ಸಿನಿ ರಸಿಕರಿಗೆ ನೀಡುವ ಪ್ರಯತ್ನಕ್ಕೆ ಕೈಹಾಕಿದೆ. ಇನ್ನು ಚಿತ್ರ ವೀಕ್ಷಿಸಿದ ದರ್ಶನ್ ಅಭಿಮಾನಿಗಳು ಚಿತ್ರ ಸೂಪರ್ ಎಂದರೆ, ಸಾಮಾನ್ಯ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕ್ರಾಂತಿ ಚಿತ್ರ ತೆರೆಕಂಡ ಬೆನ್ನಲ್ಲೇ ದೊಡ್ಡ ಮಟ್ಟದಲ್ಲಿ ಫ್ಲಾಪ್ ಎಂಬ ವಿಮರ್ಶೆಗಳು ಹರಿದಾಡಿದ್ದವು.

ಫ್ಲಾಪ್ ಕ್ರಾಂತಿ, ಡಿಸಾಸ್ಟರ್ ಕ್ರಾಂತಿ ಎಂಬ ಟ್ಯಾಗ್‌ಗಳು ದೊಡ್ಡ ಸಂಖ್ಯೆಯಲ್ಲಿ ಟ್ವಿಟರ್‌ನಲ್ಲಿ ಹರಿದಾಡಿದ್ದವು. ಈ ಟ್ಯಾಗ್‌ಗಳ ಜತೆ ಚಿತ್ರ ಚೆನ್ನಾಗಿಲ್ಲ, ಚಿತ್ರ ಸೋಲುತ್ತೆ ಎಂದು ದರ್ಶನ್ ವಿರೋಧಿಗಳು ಬರೆದುಕೊಂಡಿದ್ದರು. ಹೀಗೆ ದೊಡ್ಡ ಮಟ್ಟದ ನೆಗೆಟಿವಿಟಿ ಕ್ರಾಂತಿ ಚಿತ್ರಕ್ಕೆ ಎದುರಾಯಿತು. ದರ್ಶನ್ ಅಭಿಮಾನಿಗಳು ಚಿತ್ರಕ್ಕೆ ಬಂದ ಈ ಅಪಪ್ರಚಾರದ ವಿರುದ್ಧ ಕಿಡಿಕಾರಿದರು. ಸದ್ಯ ಈ ರೀತಿಯ ಅಪಪ್ರಚಾರದ ಕುರಿತು ರತ್ನನ್ ಪ್ರಪಂಚ ಹಾಗೂ ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರಗಳ ಖ್ಯಾತಿಯ ನಟ ಪ್ರಮೋದ್ ಸಹ ಪ್ರತಿಕ್ರಿಯಿಸಿದ್ದು, ನೆಗೆಟಿವಿಟಿಯ ವಿರುದ್ಧ ಕಿಡಿಕಾರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ವಿಚಾರ.

Sat Jan 28 , 2023
ಜೆಡಿಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನಾನೇನು ಕುಸ್ತಿ ಆಡಲೇ ನಾನು ನೀತಿಗಳ ಮೇಲೆ ಹೋಗ್ತೇನೆ ಯಾರ ಮೇಲೂ ವೈಯಕ್ತಿಕ ವಿಚಾರದಲ್ಲಲ್ಲ ಜೆಡಿಎಸ್ ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ ಜೆಡಿಎಸ್ ನವರಿಗೆ ನಾವು ಹೇಳ್ತಾ ಇದೇವಿ ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಅನ್ನುತ್ತಿದ್ದಾರೆ ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಅನ್ನುತ್ತಿದ್ದೇನೆ ನಾನೇನು ಕುಸ್ತಿ ಮಾಡೋಕೆ ಆಗುತ್ತಾ? ನನಗೆ ವಿಸರ್ಜನೆ ಪದ […]

Advertisement

Wordpress Social Share Plugin powered by Ultimatelysocial