ಚಾಮರಾಜನಗರದ ಗೂಳಿಪುರ ಗ್ರಾಮದ ಸುಭ್ರಮಣ್ಯ ಸ್ವಾಮಿ ದೇವಸ್ಥಾನಲ್ಲಿ 5 ನೇ ವರ್ಷದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು….ಗ್ರಾಮದಲ್ಲಿ ಸುಭ್ರಮಣ್ಯ ಸ್ವಾಮಿಯ ಉತ್ಸವವನ್ನು ನಡೆಸಿ. ನಂತರ ಅನ್ನ ಸಂತರ್ಪಣೆಯನ್ನು ಗ್ರಾಮಸ್ಥರು ಏರ್ಪಡಿಸಿದರು..ಆರಾಧನಾ ಮಹೋತ್ಸವಕ್ಕೆ ಹೊಂಡರಬಾಳು ಮಠದ ನೀಲಕಂಠಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿ ಮಾತನಾಡಿದರು..ಗ್ರಾಮಸ್ಥರು 3 ವರ್ಷಗಳಿಂದ ಈ ಅನ್ನ ಸಂತರ್ಪಣೆ ಮಾಡಿಕೊಂಡು ಬರುತ್ತಿದ್ದು, ದೇವಸ್ಥಾನದ ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಆಗಲಿ ಎಂದು ಆರೈಸಿದರು…ಕೋವಿಡ್ ಕಾರಣದಿಂದ ಭಕ್ತರು ಎಲ್ಲಾ ರಂಗಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.ಇದೇ ಕಾರಣದಿಂದ ಈ ವರ್ಷ ಆರಾಧನೆಯನ್ನು ಸರಳ ರೂಪದಲ್ಲಿ ಆಚರಿಸಲ ನಿರ್ಧರಿಸಲಾಗಿತ್ತು. ಆದರೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು, ಭಕ್ತಾದಿಗಳು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತು ಹೂವು, ತೆಂಗಿನಕಾಯಿ, ನೈವೇದ್ಯ ಅರ್ಪಿಸಿ, ದೇವರ ದರ್ಶನ ಪಡೆದರು…ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸುಬ್ರಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು,ಗ್ರಾಮದ ಎಲ್ಲಾ ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು,ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada