ಎಎಸ್ಐ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ಎಎಸ್ಐ ಪುತ್ರ ಶರತ್ ಮೇಲೆ ಗುಂಡು ಹಾರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.ಗುಂಡು ತಗುಲಿರುವ ಎಎಸ್ಐ ಪುತ್ರ ಶರತ್ ರನ್ನು ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಾಗೇಪಲ್ಲಿ ಠಾಣೆಯ ಎಎಸ್ಐ ನಾರಾಯಣಸ್ವಾಮಿಯವರು ಪೆರೇಸಂದ್ರದಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಬ್ರೀಜಾ ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ಪೆರೇಸಂದ್ರದಲ್ಲಿರುವ ಎಎಸ್ಐ ನಾರಾಯಣಸ್ವಾಮಿಯವರ ಮನೆಗೆ ನುಗ್ಗಿ ಎಎಸ್ಐ ಅವರ ಪತ್ನಿ ಮತ್ತು ಸೊಸೆ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.ಇದೇ ವೇಳೆ ಅಡ್ಡ ಬಂದ ನಾರಾಯಣಸ್ವಾಮಿ ಮಗ ಶರತ್ನ ಮೇಲೆ ಖದೀಮರು ಮೂರು ಸುತ್ತು ಗುಂಡು ಹಾರಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada