ಚಿಕ್ಕಬಳ್ಳಾಪುರದಲ್ಲಿ ಎಎಸ್ಐ ಮನೆಗೆ ನುಗ್ಗಿ ದರೋಡೆ

 

ಎಎಸ್ಐ ಮನೆಗೆ ನುಗ್ಗಿದ ನಾಲ್ವರು ದರೋಡೆಕೋರರು ಎಎಸ್ಐ ಪುತ್ರ ಶರತ್ ಮೇಲೆ‌ ಗುಂಡು ಹಾರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.ಗುಂಡು ತಗುಲಿರುವ ಎಎಸ್ಐ ಪುತ್ರ ಶರತ್ ರನ್ನು ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಾಗೇಪಲ್ಲಿ ಠಾಣೆಯ ಎಎಸ್ಐ ನಾರಾಯಣಸ್ವಾಮಿಯವರು ಪೆರೇಸಂದ್ರದಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಬ್ರೀಜಾ ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ಪೆರೇಸಂದ್ರದಲ್ಲಿರುವ ಎಎಸ್ಐ ನಾರಾಯಣಸ್ವಾಮಿಯವರ ಮನೆಗೆ ನುಗ್ಗಿ ಎಎಸ್ಐ‌ ಅವರ ಪತ್ನಿ ಮತ್ತು ಸೊಸೆ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.ಇದೇ ವೇಳೆ ಅಡ್ಡ ಬಂದ ನಾರಾಯಣಸ್ವಾಮಿ ಮಗ ಶರತ್‌ನ ಮೇಲೆ ಖದೀಮರು ಮೂರು ಸುತ್ತು ಗುಂಡು ಹಾರಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ

Sun Jan 1 , 2023
  ಫೈನಾನ್ಸ್‌ ಕಂಪನಿಗಳಲ್ಲಿ ಸಾಲ ಬಾಕಿ ಉಳಿದಿರುವ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಕಲಿ ಎನ್‌ಒಸಿ ಹಾಗೂ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಿ.ಪ್ರಭಾಕರ (40), ಎಸ್‌. ಪ್ರಕಾಶ್‌ ಅಲಿಯಾಸ್‌ ಚೀಟಿ ಪ್ರಕಾಶ್‌ (33), ಆರ್‌. ಕಿರಣ್‌ (44) ಬಂಧಿತರು. ಆರೋಪಿಗಳು ವಂಚನೆ ಮಾರ್ಗದಲ್ಲಿ ಸಂಪಾದಿಸಿದ್ದ 90 ಲಕ್ಷ ರೂ.ಮೌಲ್ಯದ ವಿವಿಧ ಮಾದರಿಯ ಏಳು ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲ […]

Advertisement

Wordpress Social Share Plugin powered by Ultimatelysocial