ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು ಗ್ರಾಮದ ನಂದಿನಿ ವೈನ್ ಶಾಪ್ ಮುಂದೆ ಘಟನೆ.
ಘಟನೆಯಲ್ಲಿ ಮಂಚನಬೆಲೆ ಗ್ರಾಮದ ಎಂ.ಕೆ ಹರೀಶ್ ಗೆ ಗಂಭೀರ ಗಾಯ
ದಿಬ್ಬೂರು ಗ್ರಾಮದ ನಾಗರಾಜು ಶೆಟ್ಟಿ ಎಂಬಾತನಿಂದ ಲಾಂಗ್ ನಿಂದ ಹಲ್ಲೆ..
ಬಾರ್ ಮುಂದೆ ನಿಂತಿದ್ದ ಹರೀಶ್ ಗೆ ನಾಗರಾಜಶೆಟ್ಟಿ ಕುಡಿಯಲು ಮಧ್ಯ ಕೊಡಿಸುವಂತೆ ಕೆಳಿದ್ದಾನಂತೆ..
ಇದಕ್ಕೆ ಹರೀಶ್ ಪರಿಚಯವಿಲ್ಲದ ನಿನಗೆ ನಾನು ಮಧ್ಯ ಕೊಡಿಸಲ್ಲಾ ಎಂದಿದ್ದಾನೆ..
ಇದರಿಂದ ನನ್ನ ಊರಿಗೆ ಬಂದು ನನಗೆ ಎಣ್ಣೆ ಕೊಡಿಸಲ್ವಾ ಅಂತ ಗಲಾಟೆ ಮಾಡಿದ್ದಾನೆ..
ನಂತರ ನಾಗರಾಜ್ ಶೆಟ್ಟಿ ತನ್ನ ಕೈಯಲ್ಲಿದ್ದ ಕಬ್ಬಿಣದ ಲಾಂಗ್ ನಿಂದ ಹರೀಶ್ ಗೆ ಮನಸೋ ಇಚ್ಚೆ ಕೊಚ್ಚಿ ಗಾಯಗೊಳಿಸಿದ್ದಾನೆ.
ಘಟನೆಯಲ್ಲಿ ಹರೀಶ್ ರಕ್ತಸಿಕ್ತವಾಗಿ ಸ್ಥಳದಲ್ಲೆ ಕಸಿದು ಬಿದ್ದಿದ್ದಾನೆ
ಗಾಯಾಳು ಹರೀಶ್ ನನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ .
ಆರೋಪಿ ನಾಗರಾಜ್ ಶೆಟ್ಟಿ ಯನ್ನ ಬಂದಿಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: