10 ತಿಂಗಳ ಮಗುವಿನ ಜೊತೆಗೆ ತಂದೆ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಯಲ್ಲಿ ನಡೆದಿದೆ. ತಾಲೂಕಿನ ಬ್ರಾಹ್ಮಣರ ದಿನ್ನೆ ಗ್ರಾಮದ ರವಿ(35) ಎಂಬ ವ್ಯಕ್ತಿಯೇ ಈ ರೀತಿ ಸಾವನ್ನಪ್ಪಿದ್ದಾರೆ. ಇವರು ತನ್ನ 10 ತಿಂಗಳ ಕುಸುಮಗಂಗ ಎಂಬ ಮಗುವನ್ನು ಹೊತ್ತುಕೊಂಡು ಗಡದಾಸನಹಳ್ಳಿಯ ಮಂಜುನಾಥ ಎಂಬುವವರಿಗೆ ಸೇರಿದ್ದ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ರವಿಯ ಮೊದಲ ಪತ್ನಿ ಕೂಡ ಮೂರು ತಿಂಗಳ ಹಿಂದೆಯೇ ತೀರಿಕೊಂಡಿದ್ದರು. ಆ ನಂತರ ಇವರು ಎರಡನೇ ವಿವಾಹವಾಗಿದ್ದರು. ಈ ವಿವಾಹವಾದ 15 ದಿನಗಳಲ್ಲಿಯೇ ಮೊದಲ ಪತ್ನಿಯ 10 ತಿಂಗಳ ಮಗುವಿನೊಂದಿಗೆ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಅಗ್ನಿ ಅವಘಡದಿಂದ ಸುಟ್ಟು ಹೋದ ಪಂಚರ್ ಅಂಗಡಿ