ಸಿದ್ದರಾಮೇಶ್ವರ ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆ ಆರೋಪಿ ಬಂಧನ!

ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶಾಸಕರಾದ ಎಂ. ಚಂದ್ರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಸೇರಿ 12 ಜನರಿಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಡಾ. ತಿಪ್ಪೇರುದ್ರಸ್ವಾಮಿ ಬಂಧಿತ ಆರೋಪಿಯಾಗಿದ್ದು ಅಖಿಲ ಕರ್ನಾಟಕ ವಡ್ಡ ಭೋವಿ ಸಂಘಕ್ಕೆ ಪರ್ಯಾಯವಾಗಿ ರಾಷ್ಟ್ರೀಯ ವಡ್ಡಸೇನೆ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.ಹೀಗಾಗಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಎಸ್. ಪಿ.ಪರಶುರಾಮ್ ತಿಳಿಸಿದ್ದಾರೆ.

ಬೈಟ್: ಪರಶುರಾಮ್ ಎಸ್.ಪಿ

ವಾ.ಓ: ಚಿತ್ರದುರ್ಗದ ಪ್ರಸಿದ್ದ ಮಠಗಳಲ್ಲಿ ಒಂದಾಗಿರುವ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸೇರಿದಂತೆ ಜಿಲ್ಲೆಯ ಇಬ್ಬರು ಶಾಸಕರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಬೋವಿ ಸಮುದಾಯದ ಇಬ್ಬರು ಶಾಸಕರಾದ ಹೊಸದುರ್ಗದ ಕ್ಷೇತ್ರದ ಗೂಳಿಹಟ್ಟಿ ಡಿ ಶೇಖರ್, ಹಾಗೂ ಹೊಳಲ್ಕೆರೆ ಎಂ .ಚಂದ್ರಪ್ಪ ಸೇರಿದಂತೆ ಮೂವರಿಗೆ ಕೊಲೆ ಬೆದರಿಕೆ ಬಂದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಳೆಗೆ ಮನೆಯೊಂದರಲ್ಲಿ ಬ್ರಹ್ಮಕಮಲ ಅರಳಿವೆ.

Mon Jul 18 , 2022
ಕೊಪ್ಪಳದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಮಳೆಗೆ ಮನೆಯೊಂದರಲ್ಲಿ ಬ್ರಹ್ಮಕಮಲ ಅರಳಿವೆ. ಹೌದು! ಕೊಪ್ಪಳದ ಸಿಂಪಿಲಿಂಗಣ್ಣ ರಸ್ತೆಯಲ್ಲಿರುವ ಶಿವಕುಮಾರ ಕೋಣಂಗಿ ಎನ್ನುವವರ ಮನೆಯಲ್ಲಿ ಶನಿವಾರ 5 ಬ್ರಹ್ಮ ಕಮಲಗಳು ಅರಳಿದ್ರೆ ಭಾನುವಾರ ರಾತ್ರಿ 6 ಕಮಲಗಳು ಅರಳಿವೆ. ಇದು ಒಂದು ರಾತ್ರಿಯ ವಿಸ್ಮಯ ಹೂವು. ವರುಷಕ್ಕೊಮ್ಮೆ ಅರಳುವ ಈ ಅದ್ಭುತ ಹೂ ಬ್ರಹ್ಮಕಮಲ. ರಾತ್ರಿಯ ಗಾಢ ಕತ್ತಲಿನಲ್ಲಿ ಬೆಳಗುವ ಈ ಅಪ್ಪಟ ಬಿಳಿ ಬಣ್ಣದ, ನಕ್ಷತ್ರ ದಳಗಳ ಹೂ ಮನಮೋಹಕ. […]

Advertisement

Wordpress Social Share Plugin powered by Ultimatelysocial