ಆಯ್ಕೆದಾರರಿಂದ ಮತ್ತೊಮ್ಮೆ ಪೃಥ್ವಿ ಶಾ ಕಡೆಗಣನೆ, ಭಾವನಾತ್ಮಕ ವಿಡಿಯೋ ಹಂಚಿಕೊಂಡ ಕ್ರಿಕೆಟಿಗ

 

ಪ್ರತಿ ಬಾರಿ ಯಾವುದಾದರೂ ದ್ವಿಪಕ್ಷೀಯ ಸರಣಿಗೆ ಅಥವಾ ಪ್ರಮುಖ ಟೂರ್ನಿಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದಾಗ ಒಂದಿಲ್ಲೊಂದು ವಿವಾದ ಆಗುತ್ತಿದೆ. ಹಲವು ಪ್ರತಿಭಾವಂತ ಕ್ರಿಕೆಟಿಗರನ್ನು ಕಡೆಗಣಿಸಲಾಗಿದೆಯೆಂದೊ ಅಥವಾ ಫಾರ್ಮ್‌ನಲ್ಲಿ ಇಲ್ಲದ ಆಟಗಾರರಿಗೆ ಮಣೆ ಹಾಕಲಾಗಿದೆಯೆಂದು ಆಯ್ಕೆದಾರರನ್ನು ಟೀಕಿಸಲಾಗುತ್ತದೆ.ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20 ತಂಡಕ್ಕೆ ಹಿರಿಯರಿಗೆ ವಿಶ್ರಾಂತಿ ನೀಡಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿದೆ. ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಈ ಬಾರಿಯೂ ಪ್ರತಿಭಾವಂತ ಕ್ರಿಕೆಟಿಗ ಪೃಥ್ವಿ ಶಾ ಮತ್ತೊಮ್ಮೆ ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟಿದ್ದಾರೆ.2021ರ ಜುಲೈನಲ್ಲಿ ಪೃಥ್ವಿ ಶಾ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಆಡಿದ್ದರು, ಅಂದಿನಿಂದ ಅವರು ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಈ ಬಾರಿಯೂ ತಾವು ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಸರಣಿಯ ವೇಳೆಯಲ್ಲಿ ಕೂಡ ತಂಡಕ್ಕೆ ಆಯ್ಕೆಯಾಗದ ಸಂಧರ್ಭದಲ್ಲಿ ಪೃಥ್ವಿ ಶಾ ಸಾಯಿ ಬಾಬಾ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ನೋವು ಹೊರಹಾಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ರೋಗ, ಹವಾಮಾನ ವೈಪರೀತ್ಯದಿಂದ ತತ್ತರಿಸಿದ ಹೈನೋದ್ಯಮ, ಹಾಲು ಸಂಗ್ರಹ 94 ರಿಂದ 76 ಲಕ್ಷ ಲೀ.ಗೆ ಇಳಿಕೆ.

Wed Dec 28 , 2022
ಹವಾಮಾನ ವೈಪರೀತ್ಯದಿಂದ ಮೇವಿನ ಸಮಸ್ಯೆ ಎದುರಾಗಿದೆ. ಕಾಲುಬಾಯಿ ರೋಗದಿಂದ ಹಸುಗಳು ಬಳಲಿದ್ದು ಸಹ ಹಾಲು ಉತ್ಪಾದನೆಗೆ ಸಮಸ್ಯೆಯಾಗಿದೆ. ಇತ್ತೀಚೆಗೆ ಚರ್ಮಗಂಟು ರೋಗ ಮಾರಕವಾಗಿ ಪರಿಣಮಿಸಿದೆ. ಚರ್ಮಗಂಟು ರೋಗದಿಂದ ಆತಂಕಗೊಂಡಿರುವ ಹೈನುಗಾರರು 10-15 ಸಾವಿರ ರೂ. ಮೌಲ್ಯದ ಹಸುಗಳನ್ನು ಕೇವಲ 2-3 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial