ಸಿಟಿ ರವಿ, ಅಶ್ವಥ್ ನಾರಾಯಣ ಇವರದು ಎಲುಬಿಲ್ಲದ ನಾಲಿಗೆ; ಸಲೀಂ ಅಹಮ್ಮದ್ ಗರಂ
ಹುಬ್ಬಳ್ಳಿ: ಅಶ್ವಥ್ ನಾರಾಯಣ ರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಅವರಿಗೆ ನಾಚಿಕೆಯಾಗಬೇಕು, ಸಂವಿಧಾನದ ಮೇಲೆ ವೋಟ್ ತಗೋತಾರೆ.
ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡೋದು ಅವರ ಬದ್ದತೆ ತೋರಸತ್ತೆ. ಹೊಡಿ ಬಡಿ ಸರ್ಕಾರ ಬಿಜೆಪಿದು ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಸರ್ಕಾರದ ಆಯಸ್ಸು ಕೇವಲ 60 ದಿನ. 60 ದಿನ ಆದ ಮೇಲೆ ಸರ್ಕಾರ ಹೋಗತ್ತೆ ಎಂದ ಸಲಿಂ ಅಹಮದ್.
ಹೀಗಾಗಿ ಅವರು ಹುಚ್ಚಾಗಿ ಮಾತಾಡ್ತಾರೆ. ಸಿಟಿ ರವಿ, ಅಶ್ವಥ್ ನಾರಾಯಣ ಇವರದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತಾಡ್ತಾರೆ. ಮೋದಿ ನೂರ ಸಲ ಬಂದರು ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ. ಇದು ಬಿಜೆಪಿ ಪಕ್ಷ ಅಲ್ಲ,ಬ್ರಷ್ಟಾಚಾರ ಜನತಾ ಪಾರ್ಟಿ,ಬ್ರೋಕರ್ ಜನತಾ ಪಾರ್ಟಿ ಎಂದ ಸಲೀಂ ಅಹಮ್ಮದ್.
ಇನ್ನು ರೈತರಿಗೆ ಪರಿಹಾರ ಕೊಡೋ ಯೋಗ್ಯತೆ ಇಲ್ಲಿವರಿಗೆ. ಅದನ್ನು ಬಿಟ್ಟು ಟಿಪ್ಪು,ಸಾವರ್ಕರ್ ಬೇಕಾ ಎಂದು ಮಾತಾಡ್ತೀದಾರೆ. ಇದು ಬ್ರಷ್ಟಾಚಾರದಲ್ಲಿ ಉದಯವಾದ ಪಾರ್ಟಿ, ಬ್ರಷ್ಟಾಚಾರದಲ್ಲಿ ಮುಳುಗಿದೆ. ಭಾವನಗೆಳಿಂದ ಸಮಾಜ ಒಡೆಯೋ ಕೆಲಸ ಮಾಡ್ತೀದಾರೆ. ಇವರ ಏನೇ ಮಾಡಲಿ ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ. ರಾಜ್ಯದಲ್ಲಿ ನಾವು 150 ಸೀಟ್ ಗೆಲ್ತೀವಿ ಎಂದ ಸಲೀಂ ಅಹಮ್ಮದ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada